ಉದಯವಾಹಿನಿ, ಬೆಂಗಳೂರು : ಬಿ.ಎಸ್.‌ ಯಡಿಯೂರಪ್ಪ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ಬಗ್ಗೆ ಯತ್ನಾಳ್‌ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಯನ್ನು ನಾನು ಕೂಡ ಒಪ್ಪುವುದಿಲ್ಲ.ಯತ್ನಾಳ್‌ ಹೈಕಮಾಂಡ್‌ ಬಳಿ ಮಾತನಾಡಬಹುದಿತ್ತು. ಅದನ್ನು ಬಿಟ್ಟು ಬೀದಿಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದರು.ಯತ್ನಾಳ್‌ ಅವರ ಅಸಮಾಧಾನವನ್ನು ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ. ಯತ್ನಾಳ್‌ ಅವರ ಮನಸ್ಥಿತಿ ಏನಿದೆ ಅಂತಾ ಗೊತ್ತಿಲ್ಲ. ಯತ್ನಾಳ್‌ ಅವರು ಸಹ ಹಿಂದೂ ಹುಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!