ಉದಯವಾಹಿನಿ, ಬೆಳಗಾವಿ : ಹೊಸ ವರ್ಷದ ಪಾರ್ಟಿಗೆ ಹೋಗಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬೆಳಗಾವಿ ಹೊರವಲಯದ ಕಣಬರ್ಗಿ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಸಿದ್ದರಾಯ ಶಿಗಿಹಳ್ಳಿ (24) ಎಂದು ಗುರುತಿಸಲಾಗಿದೆ.ಸಿದ್ದರಾಯ ತನ್ನ ಸ್ನೇಹಿತರ ಜೊತೆ ಪಾರ್ಟಿಗೆ ಹೋಗಲು ರೆಡಿಯಾಗಿದ್ದ, ಆದರೆ ಮನೆಯವರು ಪಾರ್ಟಿ ಎಲ್ಲಾ ಬೇಡ ಮನೆಯಲ್ಲಿರು ಎಂದಿದ್ದಕ್ಕೆ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!