ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಲು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ಗೃಹ ಸಚಿವ ಪರಮೇಶ್ವರ್‌ ಅವರು ಹೇಳಿದ್ದಾರೆ.ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎನ್ನುವ ಹಿನ್ನಲೆಯಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ.ಗೃಹ ಸಚಿವ ಪರಮೇಶ್ವರ್​ ಪೊಲೀಸರಿಗೆ ಹಣೆಗೆ ಕುಂಕುಮ, ವಿಭೂತಿ ಇಟ್ಟುಕೊಳ್ಳಬಾರದೆಂದು ಎಂದು ಗೃಹ ಸಚಿವರು ಹೇಳಿದ್ದರು, ಅಂತಹ ಸುದ್ದಿಯೊಂದು ವೈರಲ್ ಆದ ಬೆನ್ನಲೇ, ಈ ಬಗ್ಗೆ ಅವರು ತಿಳಿಸಿದ್ದಾರೆ.ಇನ್ನೂ ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಅವರು ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ನಿಯಮಗಳಿವೆ. ಸರ್ಕಾರದಲ್ಲಿ ಬ್ಲೂ ಬುಲ್​ ಇದೆ ಅದರಲ್ಲಿ ಏನಿದೆಯೋ ಅದೇ ರೀತಿ ಆಗ್ಬೇಕು ಅಂಥ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!