ಉದಯವಾಹಿನಿ,ಇಂಡಿ: ತಾಲೂಕಿನಲ್ಲಿ ಕಾರ್ಯಕರ್ತೆಯರ ಸನ್ 2009 ರಿಂದ 2023ರ ವರೆಗಿನ ಕೆಲವು ಆಶಾ ಕಾರ್ಯಕರ್ತೆಯರ ನೇಮಕ ಮಾಡಿಕೊಳ್ಳುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನೇಮಕದ ಕೆಲವು ಸರಕಾರದ ಆದೇಶಗಳು ಸುತ್ತೊಲೆಗಳು,ಗಾಳಿಗೆ ತೂರಿ ಆಯ್ಕೆ ಮಾಡಿರುತ್ತಾರೆ .ಅಂತಹ ಆಶಾ ಕಾರ್ಯಕರ್ತೆಯರು ಹಾಗೂ ನೇಮಕ ಮಾಡಿಕೊಳ್ಳುವಲ್ಲಿ ಶಾಮಿಲಾದ ಅಧಿಕಾರಿಗಳನ್ನು ವಜಾಗೊಳಿಸಿ ಅವರ ಮೇಲೆ ಕರ್ತವ್ಯಲೋಪದಡಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಎದರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್ ಸಂಘಟನೆಯಇಂಡಿ ತಾಲೂಕಾ ಪದಾಧಿಕಾರಿಗಳು ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಜಯಪುರ ಇವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆರ್.ಪಿ.ಸೇನೆಯ ಜಿಲ್ಲಾಧ್ಯಕ್ಷರಾದ ಲಕ್ಷಣ ದೇವಾಪೂರ ರಾಜಕುಮಾರ ಕಾಖಂಡಕಿ, ಆರ್.ಪಿ.ಐ.(ಅ) ದ ತಾಲೂಕಾ ಅಧ್ಯಕ್ಷರಾದ ಚಂದ್ರಶೇಖರ ಮೆಲಿನಮನಿ.ಶಿವಾನಂದ ಹರಿಜನ, ಪರಶುರಾಮ ಉಕ್ಕಲಿ.ಶಶಿಕುಮಾರ ಹರಿಜನ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.
-ಚಂದ್ರಶೇಖರ್ ಮೇಲಿನಮನಿ ಇಂಡಿ ತಾಲೂಕ ಅಧ್ಯಕ್ಷರು ಆ‌ ಪಿ ಐ (ಅ)  

Leave a Reply

Your email address will not be published. Required fields are marked *

error: Content is protected !!