ಉದಯವಾಹಿನಿ, ಮಲೇಬೆನ್ನೂರು: ಪಟ್ಟಣ ಸೇರಿ ಸುತ್ತಮುತ್ತ ಬೀಸಿದ ಬಿರುಗಾಳಿ ಮಳೆ ಆರ್ಭಟಕ್ಕೆ ಮಂಗಳವಾರ 10 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದವೆ. ಸಮೀಪದ ಗುಳದಹಳ್ಳಿ ಶ್ರೀನಿವಾಸ ಕ್ಯಾಂಪ್‌ನಲ್ಲಿ ಬೀಸಿದ ಬಿರುಗಾಳಿ ಮಳೆಗೆ ತೆಂಗಿನಮರ ತುಂಡಾಗಿದೆ. ಪಟ್ಟಣದ ಇಂದಿರಾನಗರದಲ್ಲಿ ಸಿಲ್ವ‌ರ್ ಓಕ್ ಮರ ತುಂಡಾಗಿ ಬಿದ್ದು. ವಿದ್ಯುತ್ ಮಾರ್ಗ ಬಂದ್ ಆಗಿದೆ. ಪಟ್ಟಣದ ಪೊಲೀಸ್ ಠಾಣೆ ಬಳಿ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ.
ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 3 ವಿದ್ಯುತ್ ಪರಿವರ್ತಕಗಳು ವಾಲಿದ್ದು ಹೊಸದಾಗಿ ಅಳವಡಿಸಿಬೇಕಿದೆ. 2 ಕಡೆ ಸಂಭವಿಸಿದ ಹಾನಿಯಿಂದ ಅಂದಾಜು ₹ 2 ಲಕ್ಷ ನಷ್ಟವಾಗಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಉಮೇಶ್ ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಪಟ್ಟಣದ ಪಶ್ಚಿಮ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಬುಧವಾರ ಸಂಜೆ ಹೊತ್ತಿಗೆ ಪುನರಾರಂಭವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!