ಉದಯವಾಹಿನಿ, ಬೀದರ್: ಇಲ್ಲಿಯ ಬ್ಯಾಂಕ್ ಕಾಲೊನಿಯ ಶ್ರೀಗುರು ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮಕ್ಕಳು ಸ್ವತಃ ತಯಾರಿಸಿದ 111 ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಎಟಿಎಂ, ಕ್ಷಿಪಣಿ, ಚಂದ್ರಯಾನ 3, ಸ್ವಚ್ಛ ಭಾರತ ಅಭಿಯಾನ, ಜಲ, ಶಬ್ದ, ವಾಯು ಮಾಲಿನ್ಯ, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು, ಜಲಚರಗಳು, ಹಣ್ಣು, ತರಕಾರಿ, ಸಿರಿಧಾನ್ಯ, ಕನ್ನಡ, ಹಿಂದಿ, ಗಣಿತ ಮೊದಲಾದ ವಿಷಯಕ್ಕೆ ಸಂಬಂಧಿಸಿದ ಮಾದರಿಗಳ ಬಗ್ಗೆ ಮಕ್ಕಳು ನಿರರ್ಗಳವಾಗಿ ವಿವರಣೆ ನೀಡಿ ಗಮನ ಸೆಳೆದರು. ಪಾಲಕರಿಗೆ ವಿವಿಧ ಆಟೋಟಗಳನ್ನೂ ಏರ್ಪಡಿಸಲಾಗಿತ್ತು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಕಲಾಲ್, ಕಾರ್ಯದರ್ಶಿ ಸಂತೋಷ ಮಂಗಳೂರೆ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಭಾಲ್ಕಿಯ ಬಿಸಿಯೂಟ ಅಧಿಕಾರಿ ಮಲ್ಲಿನಾಥ ಸಜ್ಜನ್, ಶಾಲೆಯ ಅಧ್ಯಕ್ಷ ನರಸಾರೆಡ್ಡಿ, ಕಾರ್ಯದರ್ಶಿ ಬಸವರಾಜೇಶ್ವರಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!