ಉದಯವಾಹಿನಿ,ಆನೇಕಲ್: ಡೆಲ್ಲಿಯ ಹಿರಿಯ ಪತ್ರಕರ್ತರಾದ ಮುಖೇಶ್ ಸರ್ಕಾರ್ ಎಂಬುವರು ಸಂವಿದಾನದ ಮಹತ್ವ ಮತ್ತು ಅಂಬೇಡ್ಕರ್ ಆಶಯಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕನ್ಯಾ ಕುಮಾರಿಯಿಂದ ಡೆಲ್ಲಿ ವರೆಗೆ ರಥ ಯಾತ್ರೆ ಹಮ್ಮಿಕೊಂಡಿದ್ದು ಇಂದು ಆನೇಕಲ್ ತಾಲ್ಲೂಕಿನ ಎಸ್.ತಿಮ್ಮಸಂದ್ರ ಗ್ರಾಮಕ್ಕೆ ರಥ ಯಾತ್ರೆಯು ಬರುತ್ತಿದ್ದಂತೆ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ರಾಜ್ಯಾಧ್ಯಕ್ಷ ಮರಸೂರು ಡಾ|| ಕೃಷ್ಣಪ್ಪರವರ ನೇತೃಥ್ವದಲ್ಲಿ ರಥಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು ಹಾಗೂ ಅಂಬೇಡ್ಕರ್ ಜೈಕಾರ ಹಾಕಲಾಯಿತು. ಇದೇ ಸಂಧರ್ಭದಲ್ಲಿ ಡೆಲ್ಲಿಯ ಹಿರಿಯ ಪತ್ರಕರ್ತರಾದ ಮುಖೇಶ್ ಸರ್ಕಾರ್ ರವರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಅಧ್ಯಕ್ಷೆ ಬೊಮ್ಮಸಂದ್ರ ರೇಣುಕಾ, ಉಪಾಧ್ಯಕ್ಷೆ ಮುನಿರತ್ನಮ್ಮ, ಕನ್ನಡಾಂಬೆ ರಕ್ಷಣ ವೇದಿಕೆ ಸಿಂಹ ಘರ್ಜನೆಯ ಅಧ್ಯಕ್ಷೆ ಕೀರ್ತನಾ ಮಂಜುನಾಥ್, ಹೋರಾಟಗಾರರಾದ ಮಂಜುನಾಥ್, ಚೂಡಹಳ್ಳಿ ಕಾಳಯ್ಯ, ಅರೇಹಳ್ಳಿ ಮಂಜುನಾಥ್, ಜಾಲಿ ವೆಂಕಟೇಶ್, ಸರೋಜಮ್ಮ, ಮುನಿರತ್ನಮ್ಮ, ಲಲಿತಾ ಮತ್ತಿತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!