ಉದಯವಾಹಿನಿ,ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಜಿಲ್ಲೆಯಲ್ಲಿ ಮಾನವೀಯತೆ ಮರೆತ ತಂದೆಯೊಬ್ಬ ತನ್ನ ಮಗಳಿಗೆ ಕಾಲಿನಿಂದ ಒದೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಭದ್ರಾದ್ರಿಯ ಕೊಥಗುಡೆಮ್ ಜಿಲ್ಲೆಯ ಬರ್ಗಂಪಡು ಮಂಡಲದ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಪಾಡಿಗೆ ತಾನು ಓದುತ್ತಾ ಕುಳಿತಿದ್ದ ಮಗಳ ಮುಂದೆ ಚೇರ್ ಹಾಕಿ ಕುಳಿತು, ಕಾಲಿನಿಂದ ಒದೆಯುವ ವಿಡಿಯೋವನ್ನು ಪತ್ನಿಯೇ ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.ಐಸಿಡಿಎಸ್ ಮೇಲ್ವಿಚಾರಕಿ ಸಕ್ಕುಬಾಯಿ ತನಿಖೆ ನಡೆಸಿ ಬಾಲಕಿಯ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ತಾಯಿ ಚೈಲ್ಡ್‌ಲೈನ್-1098 ಸಹಾಯವಾಣಿಗೆ ಕರೆ ಮಾಡಿ ದೌರ್ಜನ್ಯದ ಬಗ್ಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಿರಿಯಾಲ ರಮೇಶ್, ಐಟಿಸಿ ಪೇಪರ್ ಬೋರ್ಡ್‌ಗಳಲ್ಲಿ ಉದ್ಯೋಗಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!