ಉದಯವಾಹಿನಿ, ಪಾಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ವಿರೋಧ ಪಕ್ಷಗಳು ಕೆಲಸ ಮಾಡುತ್ತವೆ ಎಂದು ಆರ್ಜೆಡಿ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಸುಳಿವು ನೀಡಿದ್ದಾರೆ.
ಬಿಹಾರದ (Bihar) ನವಾಡದಲ್ಲಿ ನಡೆದ ‘ಮತದಾರ ಅಧಿಕಾರ್’ ರ್ಯಾಲಿಯಲ್ಲಿ (Voter Adhikar Rally) ಮಾತನಾಡಿದ ಅವರು, ಮುಂದಿನ ಬಾರಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಬಿಹಾರದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆಯನ್ನು ರಚಿಸಿಕೊಂಡಿವೆ. ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಳ್ಳಲು ಬಯಸುತ್ತಿದೆ, ನಾವು ಬಿಹಾರಿಗಳು. ಒಬ್ಬ ಬಿಹಾರಿ ಎಲ್ಲರಿಗಿಂತ ಮೇಲು. ನಾವು ಚುನಾವಣೆಗಳನ್ನು ಖೈನಿನಂತೆ (ತಂಬಾಕು ಜಗಿಯುವುದು) ಪರಿಗಣಿಸುತ್ತೇವೆ. ನಾವು ಅದನ್ನು ಉಜ್ಜಿ ಎಸೆಯುತ್ತೇವೆ ಎಂದರು.
ಚುನಾವಣಾ ಅಯೋಗ ಬಿಜೆಪಿಯ ಆದೇಶದಂತೆ ಜೀವಂತ ಮತದಾರರ ಹೆಸರುಗಳನ್ನು ಅಳಿಸಿಹಾಕಿ ಅವರನ್ನು ಸತ್ತಿದ್ದಾರೆಂದು ಘೋಷಿಸುತ್ತಿದೆ. ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ತೋರಿಸಲಾಗಿದೆ. ಎಸ್ಐಆರ್ ಮತಗಳ ದರೋಡೆಕೋರ. ನಾವು ಹಾಗೆ ಆಗಲು ಬಿಡುವುದಿಲ್ಲ. ಹಳೆಯ ಮತ್ತು ದುರ್ಬಲ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರವನ್ನು ಕಿತ್ತೊಗೆಯುವಂತೆ ಆರ್ಜೆಡಿ ನಾಯಕ ಯುವಕರನ್ನು ಒತ್ತಾಯಿಸಿದರು.
