ಉದಯವಾಹಿನಿ, ಡೆಹ್ರಾಡೂನ್‌: ಉತ್ತರಾಖಂಡ ಮೇಘಸ್ಪೋಟಕ್ಕೆ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ಗುಡ್ಡಗಾಡು ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಉತ್ತರಾಖಂಡ ಬಿಜೆಪಿ ಸಂಸದ ಅನಿಲ್ ಬಲುನಿ, ಭೂಕುಸಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಸಂಸದರು ಸ್ಥಳದಲ್ಲಿದ್ದಾಗಲೇ ಕಲ್ಲುಗಳು ಮತ್ತು ಭಗ್ನಾವಶೇಷಗಳು ಪರ್ವತದ ಕೆಳಗೆ ಉರುಳುತ್ತಿದ್ದಂತೆ ಬೆಟ್ಟವು ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವರ್ಷ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ಮತ್ತು ಭೂಕುಸಿತಗಳು ಹಲವರನ್ನು ಬಲಿ ಪಡೆದಿದ್ದರೆ, ಹಲವರು ಬೀದಿ ಪಾಲಾಗಿದ್ದಾರೆ.ವಿಪತ್ತು ಪೀಡಿತ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ಭಯಾನಕ ದೃಶ್ಯವನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಉತ್ತರಾಖಂಡವು ಈ ಸಮಯದಲ್ಲಿ ಎದುರಿಸುತ್ತಿರುವ ತೀವ್ರ ನೈಸರ್ಗಿಕ ವಿಕೋಪದ ಬಗ್ಗೆ ಹೇಳುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ನಾನು ಎಲ್ಲಾ ಜನರ ಸುರಕ್ಷಿತ ಜೀವನ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ. ಈ ವಿಪತ್ತಿನ ಸಮಯದಲ್ಲಿ, ಎಲ್ಲಾ ಅಧಿಕಾರಿಗಳು, NDRF-SDRF ಸಿಬ್ಬಂದಿ, ಆಡಳಿತ ಮತ್ತು ಸವಾಲಿನ ಸಂದರ್ಭಗಳಲ್ಲಿಯೂ ರಸ್ತೆಗಳಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಮಿಕರ ಸಮರ್ಪಣೆಯನ್ನು ನಾನು ಪ್ರಶಂಸಿಸುತ್ತೇನೆ” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!