ಉದಯವಾಹಿನಿ, ಮಧುಮೇಹಿಗಳು ತಮ್ಮ ಆಹಾರ ಕ್ರಮದ ಕುರಿತು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಮಧುಮೇಹಿಗಳು ಸಿಹಿಯಾಗಿರದ ಬೇರು ತರಕಾರಿ ಆಲೂಗಡ್ಡೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆಯೇ? ಮಧುಮೇಹಿಗಳು ನಿಜವಾಗಿಯೂ ಆಲೂಗಡ್ಡೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ಆತಜ್ಞರು ಹೇಳಿದ್ದಾರೆ.
ಮಧುಮೇಹ ಕಾಯಿಲೆ ಎಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ಬಿಡುಗಡೆಯಾಗದಿದ್ದಾಗ, ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣವು ತಪ್ಪುತ್ತದೆ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುತ್ತದೆ. ಇದನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಆದರೆ, ಇನ್ಸುಲಿನ್ ಕೊರತೆಯಿಂದ, ಏನನ್ನಾದರೂ ತಿಂದ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರಗಳು ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತವೆ.
ಮಧುಮೇಹಿಗಳು ಆಲೂಗಡ್ಡೆ ಸೇವಿಸಿದರೆ ಏನಾಗುತ್ತದೆ?: ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುತ್ತದೆ. ಕಾರ್ಬೋಹೈಡ್ರೇಟ್ಸ್ ದೇಹವನ್ನು ಪ್ರವೇಶಿಸಿದ ಬಳಿಕ ಗ್ಲೂಕೋಸ್ ಆಗಿ ಬದಲಾಗುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆಲೂಗಡ್ಡೆ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುತ್ತದೆ.
ಮಧುಮೇಹಿಗಳು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಹೆಚ್ಚಿನ ಆಹಾರವನ್ನು ಸೇವಿಸಬಾರದು. ದೇಹವನ್ನು ಪ್ರವೇಶಿಸಿದ ಬಳಿಕ ಆಹಾರವು ಎಷ್ಟು ಬೇಗನೆ ಸಕ್ಕರೆಯಾಗಿ ಬದಲಾಗುತ್ತದೆ ಎಂಬುದರ ಅಳತೆಯಾಗಿದೆ ಗ್ಲೈಸೆಮಿಕ್ ಸೂಚ್ಯಂಕವಾಗಿದೆ. ಆಲೂಗಡ್ಡೆಯನ್ನು ಹುರಿದರೆ ಅಥವಾ ಡೀಪ್-ಫ್ರೈ ಮಾಡಿದರೆ, ಅದರಲ್ಲಿರುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತದೆ.
ಆಲೂಗಡ್ಡೆ ಯಾವುದರೊಂದಿಗೆ ಸೇವಿಸಬೇಕು?: ಮಧುಮೇಹಿಗಳು ಆಲೂಗಡ್ಡೆ ತಿನ್ನಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಮಧುಮೇಹಿಗಳು ಆಲೂಗಡ್ಡೆಯನ್ನು ತಿನ್ನಬಹುದು. ಆಲೂಗಡ್ಡೆ ಸಿಹಿತಿಂಡಿಗಳಷ್ಟು ಹಾನಿಕಾರಕವಲ್ಲ. ಮಧುಮೇಹಿಗಳು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಆಲೂಗಡ್ಡೆಯೊಂದಿಗೆ ಏನು ಸೇವಿಸುತ್ತೀರಿ ಎಂಬುದು ಮುಖ್ಯ. ಆಲೂಗಡ್ಡೆ ಸೇವಿಸುವಾಗ ತಟ್ಟೆಯಿಂದ ಇತರ ಕಾರ್ಬೋಹೈಡ್ರೇಟ್ ಆಹಾರಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಅನ್ನ ಹಾಗೂ ಚಪಾತಿಗಳೊಂದಿಗೆ ಆಲೂಗಡ್ಡೆ ತಿನ್ನುವುದನ್ನು ತಪ್ಪಿಸಿ. ಎರಡರಲ್ಲೂ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿವೆ. ಹೀಗಾಗಿ ಸಕ್ಕರೆ ಮಟ್ಟವು ನಿಯಂತ್ರಣ ತಪ್ಪುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಆಹಾರದಲ್ಲಿ ಅಧಿಕ ಕಾರ್ಬೋಹೈಡ್ರೇಟ್ಸ್​: ನಮ್ಮ ದೇಶದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿವೆ. ಅನ್ನ, ಚಪಾತಿ ಹಾಗೂ ಆಲೂಗಡ್ಡೆಯಂತಹ ಪಿಷ್ಟ ಹೆಚ್ಚಿರುವ ಆಹಾರವನ್ನು ಸೇವಿಸಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಪ್ರೋಟೀನ್ ಮತ್ತು ಕೊಬ್ಬಿನಿಂದ ಕೂಡಿದ ಆಹಾರಗಳನ್ನು ಸೇವಿಸಲಾಗುತ್ತದೆ. ಆದರೆ, ಮಧುಮೇಹಿಗಳು ಕಾರ್ಬೋಹೈಡ್ರೇಟ್ಸ್ ಹೊಂದಿರುವ ಆಹಾರಗಳ ಸೇವನೆ ತುಂಬಾ ಕಡಿಮೆಯಿದೆ. ಹೆಚ್ಚಿನ ಕ್ಯಾಲೋರಿಗಳು ಕಾರ್ಬೋಹೈಡ್ರೇಟ್ಸ್ ರೂಪದಲ್ಲಿ ಸೇವಿಸಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಹೆಚ್ಚಳಕ್ಕೆ ಇದು ಕೂಡ ಕಾರಣವಾಗಿದೆ. ಶೇಕಡಾ 65 ರಿಂದ 70 ರಷ್ಟು ಜನರು ಕಾರ್ಬೋಹೈಡ್ರೇಟ್‌ಗಳಿಂದ ಕ್ಯಾಲೋರಿಗಳನ್ನು ಸೇವನೆ ಮಾಡತ್ತಾರೆ. ಕಡಿಮೆ ಪ್ರೋಟೀನ್ ಮತ್ತು ಕೊಬ್ಬನ್ನು ಸೇವನೆ ಮಾಡುತ್ತಾರೆ.

ಪ್ರೋಟೀನ್ ಸೇವನೆ ಮಾಡಬೇಕು?: ನಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಶೇ.10 ರಷ್ಟು ಕಡಿಮೆ ಮಾಡಬೇಕು, ಪ್ರೋಟೀನ್ ಪ್ರಮಾಣ ಶೇ.20 ರಷ್ಟು ಹೆಚ್ಚಿಸಿ ಹಾಗೂ ಉಳಿದ ಕ್ಯಾಲೋರಿಗಳನ್ನು ಕೊಬ್ಬಿನ ರೂಪದಲ್ಲಿ ಸೇವಿಸಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಕ್ಕೆ ಸಹಾಯವಾಗುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಪ್ರೋಟೀನ್ ಪ್ರಮಾಣ ಹೆಚ್ಚಿಸಿದರೆ ಹಾಗೂ ಫೈಬರ್ ಸಮೃದ್ಧವಾಗಿರುವ ತರಕಾರಿ ಸೇವಿಸಿದರೆ, ರಕ್ತದಲ್ಲಿನ ಶುಗರ್ ಹೆಚ್ಚಾಗುವುದಿಲ್ಲ. ಆಲೂಗಡ್ಡೆಯನ್ನು ಹೇಗೆ ತಿನ್ನಬೇಕೆಂದು ಅರಿತುಕೊಳ್ಳಬೇಕು.

ಮಧುಮೇಹ ರೋಗಿಗಳು ಆಲೂಗಡ್ಡೆಯನ್ನು ಹೇಗೆ ತಿನ್ನಬೇಕು?: ಮಧುಮೇಹಿಗಳು ಹುರಿದ ಹಾಗೂ ಡೀಪ್ ಫ್ರೈಡ್ ಆಲೂಗಡ್ಡೆಯನ್ನು ಸೇವಿಸಬಾರದು. ಇದರ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಹೆಚ್ಚಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಆಲೂಗಡ್ಡೆಯನ್ನು ಬೇಯಿಸಿದರೆ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಮಧುಮೇಹಿಗಳು ಆಲೂಗಡ್ಡೆ ತಿನ್ನಲು ಬಯಸಿದರೆ ಕುದಿಸಿ ತಣ್ಣಗಾದ ನಂತರ ತಿನ್ನಬೇಕಾಗುತ್ತದೆ. ಆಲೂಗಡ್ಡೆಯನ್ನು ಅನ್ನ ಅಥವಾ ಚಪಾತಿಯೊಂದಿಗೆ ತಿನ್ನಬಾರದು ಎಂಬುದನ್ನು ನೆನಪಿನಲ್ಲಿಡಬೇಕಾಗುತ್ತದೆ. ಆಲೂಗಡ್ಡೆ ಬೇಯಿಸಿ ಸಲಾಡ್ ರೂಪದಲ್ಲಿ ಸೇವನೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!