ಉದಯವಾಹಿನಿ, ನವದೆಹಲಿ: ಕಾರ್‌ ಸ್ಫೋಟ ಪ್ರಕರಣದ ನಂತರ ರಾಷ್ಟ್ರ ರಾಜಧಾನಿ ದೆಹಲಿ ಜನ ಒಂದು ಸಣ್ಣ ಶಬ್ದಕ್ಕೂ ಬೆಚ್ಚಿ ಬೀಳುತ್ತಿದ್ದಾರೆ. ನೈಋತ್ಯ ದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ ಬಸ್‌‍ ಟೈರ್‌ ಸ್ಫೋಟದಿಂದ ಉಂಟಾದ ದೊಡ್ಡ ಶಬ್ದವು ಸ್ಥಳೀಯರಲ್ಲಿ ಭಯ ಸೃಷ್ಟಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಪಾಲಪುರದ ರಾಡಿಸನ್‌ ಬಳಿ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಬಂದಿದೆ. ತಮಗೆ ಕರೆ ಬಂದಿದೆ ಎಂದು ದೇಹಿ ಅಗ್ನಿಶಾಮಕ ಸೇವೆಗಳು ತಿಳಿಸಿವೆ, ನಂತರ ಅವರು ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳನ್ನು ಕರೆಸಿದರು.
ವ್ಯಾಪಕ ಪರಿಶೀಲನೆಯ ನಂತರವೂ ಅಧಿಕಾರಿಗಳಿಗೆ ಸ್ಥಳದಲ್ಲಿ ಏನೂ ಸಿಗಲಿಲ್ಲ ಎಂದು ಪೊಲೀಸ್‌‍ ಉಪ ಆಯುಕ್ತ (ನೈಋತ್ಯ) ಅಮಿತ್‌ ಗೋಯೆಲ್‌‍ ತಿಳಿಸಿದ್ದಾರೆ.ಕರೆ ಮಾಡಿದವರನ್ನು ಸಂಪರ್ಕಿಸಲಾಯಿತು ಮತ್ತು ಅವರು ಗುರುಗ್ರಾಮ್‌ಗೆ ಹೋಗುವಾಗ ದೊಡ್ಡ ಶಬ್ದ ಕೇಳಿಬಂದಿದೆ ಎಂದು ತಿಳಿಸಿದರು. ನಾವು ಎಲ್ಲವನ್ನೂ ಪರಿಶೀಲಿಸಿದ್ದೇವೆ ಮತ್ತು ಏನೂ ಕಂಡುಬಂದಿಲ್ಲ ಎಂದಿದ್ದಾರೆ. ಸ್ಥಳೀಯ ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್‌ ಕಡೆಗೆ ಹೋಗುತ್ತಿದ್ದ ಡಿಟಿಸಿ ಬಸ್‌‍ನ ಹಿಂಭಾಗದ ಟೈರ್‌ ಸಿಡಿದಿದೆ ಮತ್ತು ಶಬ್ದ ಅಲ್ಲಿಂದ ಬಂದಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು ಎಂದು ಡಿಸಿಪಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!