ಉದಯವಾಹಿನಿ, ಚಿಕ್ಕಬಳ್ಳಾಪುರ: ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನೊರ್ವ ವಿದ್ಯಾರ್ಥಿನಿಯರ ಜೊತೆ ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಮಾತನಾಡಿದ್ದಾನೆ ಇದರಿಂದ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ: ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನೊರ್ವ ವಿದ್ಯಾರ್ಥಿನಿಯರ ಜೊತೆ ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಮಾತನಾಡಿದ್ದಾನೆ ಇದರಿಂದ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದಲ್ಲಿ ನಡೆದಿದೆ.
ದೊಡ್ಡ ಗಂಜೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಓಬಯ್ಯ ವಿರುದ್ಧ ವಿದ್ಯಾರ್ಥಿನಿಯರು-ಅವರ ಪೋಷಕರು ಸಹ ಸೇರಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಬಿಇಒ ಉಮಾದೇವಿ ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿ ವಿದ್ಯಾರ್ಥಿಗಳು ಗೋಳಾಡಿದ್ದಾರೆ. ಮನೆಗೆ ಹೋಗಲು ರಜೆ ಕೇಳಿದ್ರೆ ಯಾರ ಜೊತೆ ಮಲಗೋಕೆ ಅಂತಾರೆ. ಹೂ ಮುಡಿಕೊಂಡು ಬಂದ್ರೆ ಯಾವ ನನ್ನ ಮಗ ಕೊಟ್ಟ ಅಂತಾರೆ. ಶೌಚಾಲಯಕ್ಕೆ ಹೋದ್ರೆ ಕೆಳಗಡೆ ಯಾವಾಗ್ಲೂ ಸೋರುತ್ತಾ ಅಂತಾರೆ ಅಂತ ಮುಖ್ಯ ಶಿಕ್ಷಕ ಓಬಯ್ಯ ವಿರುದ್ಧ ಗಂಭೀರ ಆರೋಪಗಳನ್ನ ವಿದ್ಯಾರ್ಥಿನಿಯರು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!