ಉದಯವಾಹಿನಿ, ಅಬುಧಾಬಿ: ʻದುಬೈ ಅಂತಾರಾಷ್ಟ್ರೀಯ ಏರ್‌ಶೋನಲ್ಲಿ ಭಾರತದ ತೇಜಸ್‌ ಲಘು ಯುದ್ಧವಿಮಾನ ಪತನಗೊಂಡಿದ್ದು, ಪೈಲಟ್ ದುರ್ಮರಣಕ್ಕೀಡಾಗಿದ್ದಾರೆ. ನಮನ್ ಸಯಾಲ್ ಸಾವಿಗೀಡಾದ ಪೈಲಟ್‌ ಬೆಂಗಳೂರಿನ ಹೆಚ್‌ಎಎಲ್ ನಿರ್ಮಿತ ಲಘು ಯುದ್ಧ ವಿಮಾನ ವೈಮಾನಿಕ ಪ್ರದರ್ಶನ ನೀಡುವಾಗಲೇ ಪತನಗೊಂಡಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ. ದುರ್ಘಟನೆ ಬಗ್ಗೆ ಭಾರತದ ವಾಯುಸೇನೆ ಆಘಾತ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದೆ. ದುರಂತದಲ್ಲಿ ಪೈಲಟ್ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದೆ.
ತೇಜಸ್‌ ಪತನ ದುರಂತಕ್ಕೆ `ನೆಗೆಟಿವ್ ಯುಟರ್ನ್’ ಕಾರಣ ಅಂತ ವಾಯುಯಾಣ ತಜ್ಞರು ಪ್ರಾಥಮಿಕ ಮೌಲ್ಯಮಾಪನದ ಬಳಿಕ ಅಂದಾಜಿಸಿದ್ದಾರೆ. ನೆಗೆಟಿವ್‌-G ಅಂದ್ರೆ ವಿಮಾನವು ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವ ಬಲವನ್ನು ಸೂಚಿಸುತ್ತದೆ. ತೀವ್ರ ಪ್ರಕ್ಷುಬ್ಧತೆಯ ಸಮಯದಲ್ಲಿ ಇದು ಕಂಡುಬರುತ್ತದೆ. ತೇಜಸ್‌ ಯುದ್ಧ ವಿಮಾನ ನೆಲಕ್ಕಪ್ಪಳಿಸುವ ಮೊದಲು ʻನೆಗೆಟಿವ್‌ ಯೂಟರ್ನ್‌ʼ ಪಡೆಯುತ್ತಿತ್ತು. ಇದು ವಿಫಲಗೊಂಡಿದ್ದರಿಂದ ದುರಂತ ಸಂಭವಿಸಿದೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ. ಸಂಪೂರ್ಣ ತನಿಖೆ ಬಳಿಕವಷ್ಟೇ ಏನಾಗಿದೆ ಅಂತ ಹೇಳಬಹುದು ಎಂದು ತಜ್ಞರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!