ಉದಯವಾಹಿನಿ, ನವದೆಹಲಿ: ಭಾರತದ ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ವೇಳೆ ತನ್ನ ಇಡೀ ಕುಟುಂಬ ಕಳೆದುಕೊಂಡಿದ್ದ ಪಾಕಿಸ್ತಾನ ಮೂಲದ ಉಗ್ರ ಮಸೂದ್ ಅಜರ್ ಇದೀಗ ಪ್ರತಿದಾಳಿ ಸಿದ್ಧತೆ ನಡೆಸಿದ್ದು, ತನ್ನ ಆತ್ಮಹತ್ಯಾ ಬಾಂಬರ್ ಗಳು ದಾಳಿಗೆ ಸಿದ್ಧರಾಗಿದ್ದಾರೆ ಎಂಬ ಸಂದೇಶ ರವಾನಿಸಿರುವ ಸ್ಫೋಟಕ ಆಡಿಯೋ ಇದೀಗ ಬಹಿರಂಗವಾಗಿದೆ. ಹೌದು.. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ಗೆ ಸೇರಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಉಗ್ರರು ದಾಳಿಗಳನ್ನು ನಡೆಸಲು ಮತ್ತು ಅವರು ತಮ್ಮ ಉದ್ದೇಶಕ್ಕಾಗಿ ಹುತಾತ್ಮರಾಗಲು ಕರೆಯುವುದನ್ನು ಸಾಧಿಸಲು ಹೆಚ್ಚು ಪ್ರೇರೇಪಿತರಾಗಿದ್ದಾರೆ ಎಂದು ಅಜರ್ ಹೇಳುತ್ತಿರುವುದು ಕೇಳಿಬರುತ್ತಿದೆ.ವೈರಲ್ ಆಡಿಯೋದಲ್ಲಿರುವ ವ್ಯಕ್ತಿ ಗಂಭೀರ ಬೆದರಿಕೆ ಹಾಕಿದ್ದು, ಭಾರತದ ವಿರುದ್ಧ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಎಂದು ಮಸೂದ್ ಅಜರ್ ಹೇಳಿರುವುದು ವೈರಲ್ ಆಗಿರುವ ಆಡಿಯೋದಲ್ಲಿ ದಾಖಲಾಗಿದೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪ್ರಸ್ತುತ ವೈರಲ್ ಆಗಿರುವ ಆಡಿಯೋ ಸಂದೇಶದಲ್ಲಿ “ಹುತಾತ್ಮತೆ” ಎಂದು ಉಲ್ಲೇಖಿಸಲಾಗಿದೆ. ತನ್ನ ಭಯೋತ್ಪಾದಕರು ಯಾವುದೇ ಲೌಕಿಕ ಸೌಕರ್ಯಗಳನ್ನು ಬೇಡುವುದಿಲ್ಲ ಮತ್ತು ಯಾವುದೇ ವೈಯಕ್ತಿಕ ಲಾಭದ ಅಗತ್ಯವಿಲ್ಲ ಎಂದು ಮಸೂದ್ ಅಜರ್ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆದಾಗ್ಯೂ, ಆಡಿಯೊ ರೆಕಾರ್ಡಿಂಗ್‌ನ ದಿನಾಂಕ ಮತ್ತು ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!