ಉದಯವಾಹಿನಿ, ಇಂಫಾಲ್: ಮಣಿಪುರದಲ್ಲಿ ಪತ್ನಿಯನ್ನು ಭೇಟಿಯಾಗಲು ಹೋದ ಮೈತೇಯಿ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 28 ವರ್ಷದ ಮಾಯಂಗ್ಲಂಬಮ್ ರಿಷಿಕಾಂತ ಸಿಂಗ್ ಕೊಲೆಯಾದ ವ್ಯಕ್ತಿ. ಎಕೆ ಸಿರೀಸ್ ಅಸಾಲ್ಟ್ ರೈಫಲ್ ಬಳಸಿ ಆತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಕೊಲೆ ಆರೋಪಿಗಳು ಮೈತೇಯಿ ವ್ಯಕ್ತಿಯ ಹತ್ಯೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಬೆಟ್ಟದ ಇಳಿಜಾರಿನಲ್ಲಿರುವ ಒಂದು ಬಯಲು ಪ್ರದೇಶದಂತೆ ಕಾಣುವ ಸ್ಥಳದಲ್ಲಿ ರಾತ್ರಿ ವೇಳೆ ಈ ಕೃತ್ಯ ನಡೆದಿದೆ. ರಿಷಿಕಾಂತ್‌ ಮಂಡಿಯೂರಿ ಕೈಮುಗಿದು ಬೇಡಿಕೊಂಡಿದ್ದ.

ಈ ಘಟನೆ ಮಣಿಪುರದ ಚುರಚಂದ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ರಾಜ್ಯ ರಾಜಧಾನಿ ಇಂಫಾಲ್‌ನಿಂದ 65 ಕಿ.ಮೀ ದೂರದಲ್ಲಿದೆ. ಆತನ ಪತ್ನಿ ಸಿ ಹಾವೋಕಿಪ್ ಕುಕಿ ಸಮುದಾಯದವರು. ಕಣಿವೆಯ ಕಾಕ್ಚಿಂಗ್ ಖುನೌ ನಿವಾಸಿ ಸಿಂಗ್ ನೇಪಾಳದಲ್ಲಿ ಕೆಲಸ ಮಾಡುತ್ತಿದ್ದರು. ರಜೆಯ ಮೇಲೆ ಮನೆಗೆ ಮರಳಿದ್ದರು. ಸಿಂಗ್ ಅವರನ್ನು ಕೆಲವು ದಿನಗಳವರೆಗೆ ನೋಡಲು ಅವರ ಪತ್ನಿ ಕುಕಿ ರಾಷ್ಟ್ರೀಯ ಸಂಸ್ಥೆ (ಕೆಎನ್‌ಒ) ಮತ್ತು ಅದರ ತುಯಿಬಾಂಗ್ ಜಿಲ್ಲಾ ಕೇಂದ್ರದಿಂದ ಅನುಮತಿ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!