
ಉದಯವಾಹಿನಿ, ಬೀದರ್ : ವಡಗಾಂವ ಗ್ರಾಮದ ರಸ್ತೆಯಲ್ಲಿರುವ ಸೋರಳ್ಳಿ ಕ್ರಾಸ್ ಬಳಿ ಬೈಕ್ಗಳ ಮೇಲೆ ಸಾಗಿಸುತ್ತಿದ್ದ ೬೩.೪೬ ಲಕ್ಷ ರೂ. ಮೌಲ್ಯದ ೬೩.೪೬೦ ಕೆ.ಜಿ ಗಾಂಜಾ, ೭೦ ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಚನ್ನಬಸವಣ್ಣ, ಎಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಪೃಥ್ವಿಕ ಶಂಕರ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿದ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಪೊಲೀಸ್ ಪೇದೆಗಳಾದ ಸೂರ್ಯಕಾಂತ, ರಾಮರಡ್ಡಿ, ಗೌತಮ, ಬಾಬುಶೆಟ್ಟಿ, ಚಾಲಕ ಮಹೇಶ ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜಂಬಗಿ ಗ್ರಾಮದ ವಿಜಯನಗರ ತಾಂಡ ವ್ಯ÷ಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಇಬ್ಬರು ತೆಲಂಗಾಣದ ಖರಸಗುತ್ತಿಯ ಗಂಗಾರಾಮ ತಾಂಡಾದವರಾಗಿದ್ದಾರೆ. ಇವರು ಪರಾರಿಯಾಗಿದ್ದು, ಇವರ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಗ್ರೇಡ್ ೨ ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಭೇಟಿ ನೀಡಿ ಪಂಚನಾಮೆ ಮಾಡಿದರು. ಈ ಕುರಿತು ಸಂತಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
