ಉದಯವಾಹಿನಿ, ಇಸ್ರೇಲ್ ​- ಅಮೆರಿಕ ಮತ್ತು ಇರಾನ್​ ನಡುವಿನ ಸಂಘರ್ಷಗಳು ಗಂಭೀರ ಭೌಗೋಳಿಕ ರಾಜಕೀಯ ಬಿಕ್ಕಟ್ಟಾಗಿ ಹೊರ ಹೊಮ್ಮಿದೆ. ಈ ಮಿಲಿಟರಿ ಸಂಘರ್ಷದ ದಾಳಿಗಳು ಕೊಲ್ಲಿ ದೇಶಗಳ ನೆಲೆಗಳನ್ನು ಗುರಿಯಾಗಿಸಿದ್ದು, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಸಾಗರ ವಾಣಿಜ್ಯ ಮಾರುಕಟ್ಟೆಯು ಇದರಿಂದ ಬಿಕ್ಕಟ್ಟು ಎದುರಿಸುವಂತೆ ಆಗಿದೆ.

ಈ ಸಂಘರ್ಷವು ಹಲವು ಆಯಾಮಗಳಲ್ಲಿ ಎದುರಾಗಿದ್ದು, ಅದು ಮಿಲಿಟರಿ ದಾಳಿಗಳು, ಸೈದ್ಧಾಂತಿಕ ನಿರೂಪಣೆಗಳು, ಆರ್ಥಿಕ ಒತ್ತಡ ಮತ್ತು ಭೌಗೋಳಿಕ ರಾಜಕೀಯ ಹೊಂದಾಣಿಕೆಗಳನ್ನು ಒಳಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್​ ಇರಾನ್​ ಆಡಳಿತ ಬದಲಾವಣೆ, ಕಾರ್ಯತಂತ್ರದ ಸಾಮರ್ಥ್ಯಗಳನ್ನು ಕುಗ್ಗಿಸುವುದು. ಅದರ ಪ್ರಾದೇಶಿಕ ಪ್ರಭಾವವನ್ನು ತಡೆಯುವುದು ಗುರಿಯಾಗಿಸಿಕೊಂಡಿದೆ. ಮತ್ತೊಂದೆಡೆ ಇರಾನ್​ ಬಾಹ್ಯ ಒತ್ತಡವನ್ನು ಬಲಪಡಿಸಿ, ಅದರ ವಿರೋಧಿಗಳಿಗೆ ಸಂಘರ್ಷದ ವೆಚ್ಚವನ್ನು ಹೆಚ್ಚಿಸುವತ್ತ ಪ್ರಯತ್ನಿಸುತ್ತದೆ

ವಿಶ್ಲೇಷಕರು ಈ ಸ್ಥಿತಿಯನ್ನು ಆಟದ ಸಿದ್ದಾಂತ ಚೌಕಟ್ಟಿನಲ್ಲಿ ನೋಡುತ್ತಿದ್ದು, ಪ್ರತಿಯೊಬ್ಬ ಎದುರಾಳಿಗಳು ಮತ್ತು ಮಿತ್ರರಾಷ್ಟ್ರಗಳಿಂದ ನಿರೀಕ್ಷಿತ ಪ್ರತಿಕ್ರಿಯೆಗಳ ಆಧಾರದ ಮೇಲೆ ಲೆಕ್ಕಾಚಾರದ ನಡೆಯನ್ನು ಇಟ್ಟಿವೆ.

ಪ್ರತಿಭಟನೆ ಮತ್ತು ಹುತಾತ್ಮಕ ಶಕ್ತಿ: ಸದ್ಯ ಈ ಸಂಘರ್ಷದ ಅತ್ಯಂತ ನಾಟಕೀಯ ಬೆಳವಣಿಗೆ ಎಂದರೆ, ಇರಾನ್​ ಸರ್ವೋಚ್ಛ ನಾಯಕನ ಸಂಘಟಿತ ಹತ್ಯೆಯಾಗಿದೆ. ಇಸ್ರೇಲ್ ನಡೆಸಿದ ಸಂಘಟಿತ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕನ ಹತ್ಯೆ. ಸಂಪೂರ್ಣವಾಗಿ ಮಿಲಿಟರಿ ದೃಷ್ಟಿಕೋನದಿಂದ ಮಾಡಲಾಗಿದೆ. ಈ ಶಿರಚ್ಛೇದನದ ದಾಳಿ ಮೂಲಕ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಗೆ ಅಡ್ಡಿಯನ್ನುಂಟು ಮಾಡುವ ಮತ್ತು ರಾಜಕೀಯ ಅಧಿಕಾರವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ.ಆದಾಗ್ಯೂ, ಇರಾನ್​ ಸೈದ್ಧಾಂತಿಕ ಚೌಕಟ್ಟು ಈ ತರ್ಕವನ್ನು ಸಂಕೀರ್ಣಗೊಳಿಸುತ್ತಿದೆ. ಶಿಯಾ ರಾಜಕೀಯ ಚಿಂತನೆಯು ಹುತಾತ್ಮ ವಿಚಾರದಲ್ಲಿ ಸಾಕಷ್ಟು ಸಾಂಕೇತಿಕ ಪ್ರಾಮುಖ್ಯತೆಯನ್ನು ನೀಡುತ್ತದೆ. ಇತಿಹಾಸ ಕರ್ಬಲಾ ಕದನ ಅನ್ಯಾಯವನ್ನು ವಿರೋಧಿಸಿ ಇಮಾಮ್ ಹುಸೇನ್ ಸಾವು ಕೂಡ ಶಿಯಾ ಗುರುತಿನ ಅಂಶವಾಗಿದೆ.
ಇದೇ ನಿರೂಪಣೆಯಲ್ಲಿ ನಾಯಕನ ಸಾವು ಪ್ರತಿರೋಧದ ಪ್ರಬಲ ಸಂಕೇತವಾಗಿ ರೂಪಾಂತರಗೊಳ್ಳಬಹುದು. ರಾಷ್ಟ್ರವನ್ನು ದುರ್ಬಲಗೊಳಿಸುವ ಬದಲು, ಅಂತಹ ಘಟನೆಗಳು ಭಾವನಾತ್ಮಕ ಸಜ್ಜುಗೊಳಿಸಿ, ಪ್ರತೀಕಾರಕ್ಕಾಗಿ ಸಾರ್ವಜನಿಕ ಬೆಂಬಲವನ್ನು ಬಲಪಡಿಸಬಹುದು. ಆಟದ ಸೈದ್ಧಾಂತಿಕ ಪರಿಭಾಷೆಯಲ್ಲಿ ಗಮನಿಸಿದಾಗ, ಎದುರಾಳಿಯನ್ನು ದುರ್ಬಲಗೊಳಿಸಲು ಉದ್ದೇಶಿಸಲಾದ ನಡೆ ಅಜಾಗರೂಕತೆ ಅದರ ದೃಢಸಂಕಲ್ಪವನ್ನು ಹೆಚ್ಚಿಸಬಹುದು.

ನಾಗರಿಕ ಸಾವು – ನೋವುಗಳು ಮತ್ತು ಜಾಗತಿಕ ಗ್ರಹಿಕೆಗಾಗಿ ಯುದ್ಧ: ಆಧುನಿಕ ಯುದ್ಧಗಳು ಕೇವಲ ಯುದ್ಧಭೂಮಿಯಲ್ಲಿ ಮಾತ್ರವಲ್ಲದೇ ಮಾಹಿತಿ ಕ್ಷೇತ್ರದಲ್ಲಿಯೂ ನಡೆಯುತ್ತವೆ. ನಾಗರಿಕರ ಸಾವುನೋವುಗಳು ಸಂಘರ್ಷ ಜಾಗತಿಕ ಗ್ರಹಿಕೆಗಳನ್ನು ತ್ವರಿತವಾಗಿ ರೂಪಿಸುತ್ತವೆ. ಮಿಲಿಟರಿ ದಾಳಿಯಲ್ಲಿ ಸಾವನ್ನಪ್ಪಿದ ಶಾಲಾ ಮಕ್ಕಳ ಸುದ್ದಿ ಇರಾನ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಸಂಘರ್ಷವನ್ನು ಬಾಹ್ಯ ಆಕ್ರಮಣದ ವಿರುದ್ಧ ಪ್ರತಿರೋಧ ಎಂದು ಚಿತ್ರಿಸುವ ನಿರೂಪಣೆಗಳನ್ನು ಬಲಪಡಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!