ಉದಯವಾಹಿನಿ, ಪಾಕಿಸ್ತಾನ ಸೇನೆಯ ವಕ್ತಾರರೊಬ್ಬರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ್ದ ಪಾಕ್ ಸೇನಾ ವಕ್ತಾರರಿಗೆ ಈಗ ತಮ್ಮದೇ ದೇಶದ ಜನರಿಂದ ಟೀಕೆ ಎದುರಾಗಿದೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಒಂದು ವರ್ಷದ ಹಿನ್ನೆಲೆ ಭಾರತೀಯ ಸೇನೆ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿತ್ತು. ಈ ವೇಳೆ ಅಧಿಕಾರಿಗಳು ಇಂಗ್ಲಿಷ್ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ ಅಹ್ಮದ್ ಶರೀಫ್ ಚೌಧರಿ, ನಿಮಗೆ ಇಂಗ್ಲಿಷ್ನಲ್ಲಿ ಮಾತನಾಡಲು ಯಾರು ಹೇಳಿದರು? ವಿಶ್ವಕ್ಕೆ ನಿಮ್ಮ ಕಥನವನ್ನು ತಲುಪಿಸಲು ಇದನ್ನು ಮಾಡುತ್ತಿದ್ದೀರಾ? ಎಂದು ವ್ಯಂಗ್ಯವಾಗಿ ಕೇಳಿದ್ದರು.
