ಉದಯವಾಹಿನಿ ದೇವದುರ್ಗ ಮೊನ್ನೆ ನಡೆದ ತಾಲೂಕಿನ ಗಬ್ಬೂರು ಹೋಬಳಿಯ ಹಿರೇಬೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ  ಚುನಾವಣೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಬೂದೇಪ್ಪ ಕ್ಯಾದಿಗೆ ಅವರಿಗೆ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ  ಸನ್ಮಾನಿಸಿ ಗೌರವಿಸಲಾಯಿತು.ಅವರಿಂದು ಪಟ್ಟಣದ  ವಿ ಎಸ್ ಎಸ್ ಏನ್ ಸೊಸೈಟಿ ಕಾಂಪ್ಲೆಕ್ಸ್ ನಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ  ಪ್ರಕಾಶ್ ಹೊನ್ನಟಗಿ, ಪ್ರಧಾನ ಕಾರ್ಯದರ್ಶಿ ಡಿ.ಮಾಂತೇಶ್  ಬಳ್ಳಾರಿ, ಮಲ್ಲಿಕಾರ್ಜುನ ಜೊಂಡೆ, ನರಸಪ್ಪ ಜೇರಬಂಡಿ, ರಮೇಶ ರಾಮನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!