ಉದಯವಾಹಿನಿ,ಪೀಣ್ಯ ದಾಸರಹಳ್ಳಿ: ಬಡವರ ಕೂಲಿ ಕಾರ್ಮಿಕರ ಆಸೆಯದಂತೆ ಒಂದು ಗುಡಿಸಲುಕಿಂತ ಗುಡೂ ಲೇಸು ಎಂಬುವ ಹಾಗೆ ಸಮೀಪದ ನೆಲಮಂಗಲ ನಗರಕ್ಕೆ ಕೂಗಳತೆ ದೂರದಲ್ಲಿರುವ  ಸೊಂಡೆಕೊಪ್ಪ ಮುಖ್ಯರಸ್ತೆಯ ಬಳೆ ವೀರನ ಹಳ್ಳಿಯಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ಹೊರೆಯಾಗದ ದರದಲ್ಲಿ ನಿವೇಶನಗಳು ಮಾಡಲಾಗಿದೆ ಎಂದು ಹಿರಿಯ ಗುತ್ತಿಗೆದಾರ ಹಾಗೂ ಉದ್ಯಮಿ ಶ್ರೀನಿವಾಸ್ ಅಮ್ಮಾಪುರ್ ಹೇಳಿದರು.ಅವರು ಅಮ್ಮಾಪುರ್  ಮಿಲೇನಿಯಂ ಸಂಸ್ಥೆಯ  ಆಯೋಜಿಸಿದ್ದ ಮಹಾ ಲಕ್ಷ್ಮೀ  ಪೂಜಾ ಪುನಸ್ಕಾರ ನೆರವೇರಿಸಿ  ಬಳೆವೀರನಹಳ್ಳಿಯಲ್ಲಿ ವಿಂಗಡಣೆ ಮಾಡಿರುವ ಕಾಲಿ ನಿವೇಶನಗಳಿಗೆ ಉದ್ಯಮಿ  ಶ್ರೀನಿವಾಸ್ ಅಮ್ಮಾಪುರ್ ಮಾರಾಟಕ್ಕೆ  ಚಾಲನೆ ನೀಡಿ ಮಾತನಾಡಿದರು.ಬಿಲ್ಡರ್ಸ್ ವಿ.ನಾಗರಾಜ್ ಸರ್ವರಿಗೂ ಸ್ವಾಗತಿಸಿದರು.
ಗ್ರಾಂ ಪಂಚಾಯಿತಿ ಅಧ್ಯಕ್ಷ ಸುಭಾಷ್ ಅವರು ಆಗಮಿಸಿದ ಜನ ಸಮೂಹಕ್ಕೆ ಅನ್ನ ಸಂತರ್ಪಣೆ ಮಾಡಿ ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಹೆರೋಹಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಿಲ್ಡರ್ಸ್  ವಿ.ನಾಗರಾಜ್, ಪಂಚಾಯಿತಿಯ ಅಧ್ಯಕ್ಷ  ಸುಭಾಷ್, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್, ಉದ್ಯಮಿ ಶ್ರೀನಿವಾಸ್ ಅಮ್ಮಾಪುರ್ ಅವರ ಕುಟುಂಬಸ್ಥರು, ಮಲ್ಲಿಕಾರ್ಜುನ ಅಮ್ಮಾಪುರ್ , ವಿನಯ್, ಉದಯ್,ಅಮರ್, ಗೋವಿಂದ್ ರಾಜ್,ಗುಂಡು, ವಿನೋದ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!