ಉದಯವಾಹಿನಿ, ದೇವರಹಿಪ್ಪರಗಿ: ಪಟ್ಟಣದ ಹೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ  ಶನಿವಾರ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ವಿವಿಧ ಗ್ರಾಮ,ಪಟ್ಟಣಗಳಿಂದ ಗ್ರಾಹಕರು ಪಾಲ್ಗೊಂಡು, ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಹಕರ ಕುಂದು ಕೊರತೆ ಆಲಿಸಿದ ನಂತರ ಎಇಇ ವಿಜಯಕುಮಾರ ಹವಾಲ್ದಾರ ಅವರು ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಹಕರ ಕುಂದು ಕೊರತೆ ಸಭೆ ನಡೆಯುತ್ತೆ, ಗ್ರಾಹಕರು ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಇದು ಉತ್ತಮವಾದ ವೇದಿಕೆಯಾಗಿದೆ ಹಾಗೂ ಗ್ರಾಹಕರ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಕಲಕೇರಿ ಶಾಖಾಧಿಕಾರಿ ಶಂಕರಗೌಡ ಪಾಟೀಲ, ಕೋರವಾರ ಶಾಖಾಧಿಕಾರಿ ಶ್ರೀನಿವಾಸ ಕುಲಕರ್ಣಿ, ದೇವರಹಿಪ್ಪರಗಿ ಪಟ್ಟಣದ ಶಾಖಾಧಿಕಾರಿ ಯು.ಎಲ್.ಪಟ್ಟಣ, ಗ್ರಾಮೀಣ ಶಾಖಾಧಿಕಾರಿ ಅಶೋಕ ಕಂದಗಲ್, ತಾಂತ್ರಿಕ ಸಹಾಯಕಿ ಅಮೃತಾ,ಮೇಲ್ವಿಚಾರಕರಾದ ಎ.ಎಫ್.ಅಗಸಿ,ಶಿವಾನಂದ ಜಗನ್ನಾಥ, ಟಿ.ಸಿ.ಸ್ಟೋರ್ ಕಚೇರಿ ನಿರ್ವಾಹಕ ಮಲ್ಲು ಪೂಜಾರಿ ಸೇರಿದಂತೆ ಹಲವು ಅಧಿಕಾರಿಗಳು, ಸಾರ್ವಜನಿಕರು,ಗ್ರಾಹಕರು, ರೈತರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!