ಉದಯವಾಹಿನಿ,ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಹೊಸದಾಗಿ ಮತ್ತೆ ಹಿಂಸಾಚಾರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ೫ ದಿನಗಳವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಇಂಟರ್‌ನೆಟ್ ನಿಷೇಧ ಹಿಂತೆಗೆದುಕೊಂಡ ಕೇವಲ ೪ ದಿನಗಳ ನಂತರ ಮತ್ತೆ ನಿಷೇಧ ಏರಲಾಗಿದೆ.. ಸೆಪ್ಟೆಂಬರ್ ೨೩ ರಂದು ಮಣಿಪುರದಲ್ಲಿ ಇಂಟರ್‌ನೆಟ್ ಸೇವೆ ಮರುಸ್ಥಾಪಿಸಲಾಗಿದೆ.
ಮೊಬೈಲ್ ಇಂಟರ್‌ನೆಟ್ ಡೇಟಾ ಸೇವೆಗಳು ಮತ್ತು ವಿಪಿಎನ್ ಮೂಲಕ ಇಂಟರ್‌ನೆಟ್, ಡೇಟಾ ಸೇವೆಗಳನ್ನು ಮಣಿಪುರದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಐದು ದಿನಗಳ ಕಾಲ ಅಕ್ಟೋಬರ್ ೧ರ ರಾತ್ರಿ ೭.೪೫ ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ,
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು “ನಾಪತ್ತೆಯಾದ ವಿದ್ಯಾರ್ಥಿಗಳ ದುರಂತ ಸಾವಿನ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ದುಷ್ಕರ್ಮಿ ಹಿಡಿಯಲು ನಿಕಟವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಶಾಲಾ -ಕಾಲೇಜಿಗೆ ರಜೆ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರದ ಎಲ್ಲಾ ಸರ್ಕಾರಿ ಅನುದಾನಿತ ಖಾಸಗಿ ಅನುದಾನರಹಿತ ಶಾಲೆಗಳನ್ನು ಸೆಪ್ಟೆಂಬರ್ ೨೭ ಮತ್ತು ೨೯ ರಂದು ರಜೆ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದದೆ.

Leave a Reply

Your email address will not be published. Required fields are marked *

error: Content is protected !!