ಉದಯವಾಹಿನಿ, ಚಂಡಿಗಡ: ಪಂಜಾಬ್‌ನ ಅಕಾಲಿದಳದ ನಾಯಕ ಸುರ್ಜಿತ್ ಸಿಂಗ್ ಅವರನ್ನು ಹೋಶಿಯಾರ್‍ಪುರದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸುರ್ಜಿತ್ ಸಿಂಗ್ ಮೆಗೋವಾಲ್ ಗಂಜಿಯಾನ್ ಗ್ರಾಮದ ಮಾಜಿ ಸರಪಂಚ್ ಆಗಿದ್ದರು. ಅವರ ಪತ್ನಿ ಅದೇ ಸ್ಥಾನದಲ್ಲಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ ಮತ್ತು ಅಪರಿಚಿತ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ತಲ್ವಿಂದರ್ ಸಿಂಗ್ ಮಾತನಾಡಿ, ಮೃತ ನಾಯಕ ಹತ್ತಿರದ ಪ್ರದೇಶದ ಕಿರಾಣಿ ಅಂಗಡಿಯ ಹೊರಗೆ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ. “ರಾತ್ರಿ ೭ಗಂಟೆ ಸುಮಾರಿಗೆ, ಸುರ್ಜಿತ್ ಸಿಂಗ್ ಅವರು ತಮ್ಮ ಪ್ರದೇಶದ ದಿನಸಿ ಅಂಗಡಿಯೊಂದರ ಹೊರಗೆ ಕುಳಿತಿದ್ದರು.

Leave a Reply

Your email address will not be published. Required fields are marked *

error: Content is protected !!