ಉದಯವಾಹಿನಿ, ಚಾಮರಾಜನಗರ: ನಾಡು ಉಳಿಯಬೇಕಾದರೆ ಮೊದಲು ಭಾಷೆ ಉಳಿಯಬೇಕು. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮ ಭಾಷೆ. ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆ ಅನುಷ್ಠಾನಗೊಳಿಸಬೇಕೆನ್ನುವುದು ಸರ್ಕಾರದ ಆಶಯ.
ಆದರೆ ಕರ್ನಾಟಕ ಸರ್ಕಾರದ ಆಡಳಿತ ವಿವಿಧ ಇಲಾಖೆಗಳು ಆಡಳಿತದಲ್ಲಿ ಇಂದು ಕನ್ನಡ ಭಾಷೆ ಬಳಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಈ ಪ್ರಮಾದ ಎಸೆದ ಆರೋಪ ಎದುರಿಸುತ್ತಿದೆ. ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕನ್ನಡ ಮಾಯವಾಗಿದೆ. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯೂ ವಾಹನ ನಿಲುಗಡೆಗಾಗಿ ನೀಡುವ ರಶೀದಿ ಸಂಪೂರ್ಣ ಆಂಗ್ಲಭಾಷೆಯಲ್ಲಿದೆ ಎಂದು ಸಫಾರಿಗರೊಬ್ಬರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ದೂರಿದ್ದಾರೆ.
