
ಉದಯವಾಹಿನಿ ಅಫಜಲಪುರ : ತಾಲೂಕಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಬಿ ಜೆ ಪಿ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆನೆ.ಅಲ್ಲದೆ ನಾನೊಬ್ಬ ಪದವೀಧರನಾಗಿದ್ದು.ಈ ಬಾರಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಬಿ ಜೆ ಪಿ ಮುಖಂಡ ಮಲ್ಲಿಕಾರ್ಜುನ ನಿಂಗದಳ್ಳಿ ವರಷ್ಠರಿಗೆ ಮನವಿ ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಪಕ್ಷದ ಅಧ್ಯಕ್ಷ ನಾಗಿ,ಎ ಪಿ ಎಂ ಸಿ. ಅಧ್ಯಕ್ಷ ನಾಗಿ ಕೆಲಸ ಮಾಡಿದ್ದೆನೆ. ಅಲ್ಲದೆ ಪಕ್ಷದ ರೈತಮೋರ್ಚಾ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದು. ಪಕ್ಷದ ಮುಖಂಡರು ಈ ಬಾರಿ ಅಫಜಲಪುರ ಕ್ಷೇತ್ರದವಾದ ನನಗೆ ಟಿಕೆಟ್ ಕೊಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು. ನಾನು ಈ ವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿರುವೆ ಹಾಗೂ ನಾನು ಪದವಿಧರನಾಗಿರುವುದರಿಂದ.ಮತ್ತು ಪದವಿಧರರ ಸಮಸ್ಯೆ ಬಲ್ಲವನಾಗಿದ್ದು.ಪಕ್ಷದ ಹಿರಿಯರು ನನಗೆ ಆಶಿರ್ವಾದ ಮಾಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ ವರ್ಧಮಾನ,ಶರಣು ಪದಕಿ, ಭೀಮರಾಯ ಕಲಶೆಟ್ಟಿ,ಅಂಬಣ್ಣಾ ಕುದರಿ,ಕೂಡ ಅವರು ಮಾತನಾಡಿ ಮಲ್ಲಿಕಾರ್ಜುನ್ ನಿಂಗದಳ್ಳಿ ರವರು ಬಿಜೆಪಿ ಪಕ್ಷದಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಯಾವುದೇ ಸಂದರ್ಭದಲ್ಲಿ ಕೂಡ ಇವರು ಪಕ್ಷವನ್ನ ಬಿಟ್ಟು ಬೇರೊಂದು ಪಕ್ಷಕ್ಕೆ ಹೋಗಿರುವುದಿಲ್ಲ ಪಕ್ಷದಲ್ಲಿ ಯಾವುದೇ ಕೆಲಸಗಳು ನೀಡಿದರು ಕೂಡ ಬಹಳ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾರೆ ಆದ ಕಾರಣ ಇಂತಹ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಈ ಬಾರಿ ಪದವಿಧರರ ಕ್ಷೇತ್ರದಿಂದ ಮಲ್ಲಿಕಾರ್ಜುನ್ ನಿಂಗದಳ್ಳಿ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
