ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೊಬೈಲ್‍ನಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.ವಿಡಿಯೋದಲ್ಲಿ ಚರ್ಚಿಸಲಾದ ಮಾಹಿತಿ ಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿವೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಜನ ಸಂಪರ್ಕ ಸಭೆ ನಡೆಸುವ ವೇಳೆ ಯತೀಂದ್ರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆರಂಭದಲ್ಲೇ ಹಲೋ ಅಪ್ಪಾ ಎಂದು ಮಾತು ಶುರು ಮಾಡಿದ್ದಾರೆ.
ಹಾಗಾಗಿ ಯತೀಂದ್ರ ಅವರು ಸಿದ್ದರಾಮಯ್ಯ ಅವರ ಜೊತೆಯಲ್ಲೇ ಮಾತನಾಡಿದ್ದಾರೆ ಎಂದು ಭಾವಿಸಲಾಗಿದೆ.
ವಿವೇಕಾನಂದನಾ ಎಲ್ಲಿಗೆ… ಇಲ್ಲಪ್ಪ ಇದ್ಯಾವುದು ಕೊಟ್ಟಿಲ್ಲ. ಯಾರು ಆ ಮಹದೇವ್… ? ಕೊಡಿ ಅವನಿಗೆ, ಅದಕ್ಕೆ ಹೇಳಿದ್ದು, ಕೊಡಿ ಆ ಮಹದೇವ್‍ಗೆ ಹೇಳ್ತೀನಿ. ನಾನು ಕೊಟ್ಟಿರೋದೆ ಐದು, ಅಲ್ಲಿ ಕೊಡಿ ಅದು ಎಂದು ಹೇಳುತ್ತಾರೆ.
ಅತ್ತ ಕಡೆ ಮೊಬೈಲ್ ಕೈ ಬದಲಾದಂತೆ ಕಂಡು ಬರುತ್ತಿದ್ದು, ಹಲೋ ಮಹದೇವ್ ಎಂದು ಯತೀಂದ್ರ ಮಾತು ಮುಂದುವರೆಸುತ್ತಾರೆ. ಮಹದೇವ್ ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ.. ? ಮತ್ತೆ ಇದೆಲ್ಲಾ ಯಾರು ಕೊಡ್ತಿರೋದು, ಲಿಸ್ಟ್ ಅಲ್ಲಿ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ, ಅಷ್ಟೇ ಮಾತ್ರ ಮಾಡಿ, ಒಕೆ ಎಂದು ಹೇಳಿ ಯತೀಂದ್ರ ಮೊಬೈಲ್ ಅನ್ನು ಸಹಾಯಕರಿಗೆ ಕೊಡುತ್ತಾರೆ.

Leave a Reply

Your email address will not be published. Required fields are marked *

error: Content is protected !!