ಉದಯವಾಹಿನಿ, ಬೆಂಗಳೂರು : ಎಸ್ ಸಿ,ಎಸ್ ಟಿಗೆ ಮೀಸಲಿಟ್ಟ 11 ಸಾವಿರ ಕೋಟಿಯನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಬಿಜೆಪಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಿಸಿಕೊಂಡಿರುವುದಾಗಿ ಕಾಂಗ್ರೆಸ್ ಸರ್ಕಾರ ತಿಳಿಸಿದೆ.ಯುವ ನಿಧಿ ಯೋಜನೆ ಜಾರಿಗೆ ಬಂದಿಲ್ಲ, ಶಕ್ತಿ ಯೋಜನೆಯ ಹಣ ನಿಗಮಗಳಿಗೆ ತಲುಪಿಲ್ಲ, sಅನ್ನಭಾಗ್ಯದ ಅಕ್ಕಿಯೂ ಸಿಕ್ಕಿಲ್ಲ, ಹಣವೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಗೃಹ ಲಕ್ಷ್ಮಿ ಎರಡೇ ತಿಂಗಳಿಗೆ ನಿಂತು ಹೋಗಿದೆ, ಗೃಹ ಜ್ಯೋತಿ ಮನೆಗಳಿಗೆ ಕತ್ತಲು ಕೊಟ್ಟಿದೆ. ತಮ್ಮ ಅವಾಸ್ತವಿಕ ಅಪ್ರಬುದ್ಧ ಅನುಷ್ಠಾನಕ್ಕೆ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ₹11 ಸಾವಿರ ಕೋಟಿಯನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿ ತನ್ನ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿದೆ ಎಂದು ಬಿಜೆಪಿ ಆರೋಪ ಮಾಡಿದೆ.

Leave a Reply

Your email address will not be published. Required fields are marked *

error: Content is protected !!