ಉದಯವಾಹಿನಿ, ಕೊಪ್ಪಳ: ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಆರಂಭಿಸಿರುವ ಉಚಿತ ಪ್ರಯಾಣ ಬಸ್ ಸೇವೆ ನೀಡುವ ಯೋಜನೆಯನ್ನು ಮಂತ್ರಾಲಯದವರೆಗೂ ವಿಸ್ತರಿಸಬೇಕು ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.ಗಂಗಾವತಿ ತಾಲೂಕಿನ ನವ ಬೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕರ್ನಾಟಕದ ಗಡಿಯವರೆಗೂ ಮಹಿಳೆಯರಿಗೆ ಉಚಿತ ಬಸ್ ಸೇವೆ ಇದೆ.
ಕರ್ನಾಟಕದ ಗಡಿಯಿಂದ ಮಂತ್ರಾಲಯ ಕೇವಲ ಎಂಟು ಕಿಲೋಮೀಟರ್ ದೂರವಿದ್ದು, ಅಲ್ಲಿಯವರೆಗೂ ಉಚಿತ ಬಸ್ ಸೇವೆ ಕಲ್ಪಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!