ಉದಯವಾಹಿನಿ, ಜಗಳೂರು: ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ದಲಿತರ ಗುಡಿಸಲಿಗೆ ಬೆಂಕಿಹಚ್ಚಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಹಾಗೂ ಮನೆ ನಿರ್ಮಿಸಿಕೊಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿಸಲ್ಲಿಸಿದರುಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಕಾರ್ಯಕರ್ತಕರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲಿಖಿತ ಮನವಿಸಲ್ಲಿಸಿದರು.ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ,ದಲಿತ ಕುಟುಂಬದ ಹನುಮಂತಪ್ಪನವರ ಮೂಕಪ್ರಾಣಿಗಳಾದ ಹಸುಗಳು ರಾಮೇಗೌಡನ ಜಮೀನಿನಲ್ಲಿ ಮೇಯಿಸಿದ ಕಾರಣಕ್ಕೆ ಹನುಮಂತಪ್ಪ ಅವರಿಗೆ ಚಾಕು ಇರಿದಿದ್ದಲ್ಲದೆ.ಸಹೋದರನಾದ ರೆಡ್ಡೆಪ್ಪ ಅವರಮೇಲೆ ಹಲ್ಲೆಮಾಡಿ ವಾಸವಾಗಿದ್ದ ಗುಡಿಸಲಿಗೆ ಬೆಂಕಿ ಹಚ್ಚಿರುವುದು ಖಂಡನೀಯ.ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದಲಿತ ವಿರೋಧಿ ನೀತಿ ಕಾಣುತ್ತಿದೆ.ಕೂಡಲೇ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಇಲ್ಲವಾದರೆ ಉಗ್ರಸ್ವರೂಪದ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ವಕೀಲ ಹನುಮಂತಪ್ಪ ಮಾತನಾಡಿ,ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು.ಮನುವಾದಿಗಳು ಕೋಲಾರ ಜಿಲ್ಲೆಯ ದಲಿತ ಸಮುದಾಯದ ಹನುಮಂತಪ್ಪ ಅವರ ಗುಡಿಸಲಿಗೆ ಬೆಂಕಿ ಹಚ್ಚುವುದು ದೌರ್ಜನ್ಯದ ಪರಮಾವಧಿ,ಘಟನಾ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಪೋಲಿಸರು ಆಗಮಿಸದಿದ್ದರೆ.ಕಂಬಾಪಲ್ಲಿ ಪ್ರಕರಣ ಮರುಕಳಿಸುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
