udayavahiniಉದಯವಾಹಿನಿ,ಸಿಂಧನೂರು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾಯಾತ್ರೆ ಸಿಂಧನೂರು ಕೇತ್ರದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ಸಮ್ಮುಖದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಈಗ ಕ್ಷೇತ್ರಾದ್ಯಂತ ಭಾರತ ಐಕ್ಯತಾಯಾತ್ರೆ ಪ್ರಾರಂಭವಾಗಿದೆ ಎಂದು ಹೇಳಿದರು ಬಾದರ್ಲಿಯಲ್ಲಿ ಮತ್ತು ಗಿಣಿವಾರ ಗ್ರಾಮ ಪಂಚಾಯತಿವಾರು ಎರಡು ಕಡೆ ಭಾರತ್ಐಕ್ಯತಾಯಾತ್ರೆಯ ಗ್ರಾಮ ಪಂಚಾಯತವಾರು ಪೂರ್ವಭಾವಿ ಸಭೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ ರ್ಯಾಲಿ ಹಾಗೂ, ಪಟಾಕಿ ಸಿಡಿಸಿ, ಅದ್ದೂರಿ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ನಂತರ ಮಾತನಾಡಿ ಭಾರತ್ಐಕ್ಯತಾಯಾತ್ರೆಯ ಸಲುವಾಗಿ ರಾಯಚೂರಿಗೆ ಆಗಮಿಸಲಿರುವ ನಮ್ಮೆಲ್ಲರ ನಾಯಕರಾದ ರಾಹುಲ್ ಗಾಂಧಿ ಅವರ ಜೊತೆ ನಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ನಾಯಕರ ಜೊತೆ ಹೆಜ್ಜೆ ಹಾಕೋಣ ಎಂದು ಕರೆ ಕೊಟ್ಟು, ಈ ಯಾತ್ರೆಯ ಉದ್ದೇಶವನ್ನು ಊರಿನ ಯುವಕರಿಗೆ ಹಾಗೂ ಕಾರ್ಯಕರ್ತರಿಗೆ ಯಾತ್ರೆಯ ಕರಪತ್ರವನ್ನು ಹಂಚಿ ಸವಿಸ್ತಾರವಾಗಿ ವಿವರಿಸಿದೆ.ಈ ಸಂದರ್ಭದಲ್ಲಿ ಮಾಡಶಿರವಾರ,ಬೂದಿಹಾಳ, ಗೋಮರ್ಸಿಯ ಗ್ರಾಮ ಪಂಚಾಯತಿ ಸದಸ್ಯರು, ಹಿರಿಯರು,ಯುವ ಮಿತ್ರರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!