ಉದಯವಾಹಿನಿ, ವಿಜಯಪುರ: ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹೆದರಿಕೆ, ಹಿಂಜರಿಕೆ ಇಟ್ಟುಕೊಳ್ಳದೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಪರೀಕ್ಷೆಯನ್ನು ಲೀಲಾಜಾಲವಾಗಿ ಎದುರಿಸಬೇಕು ಎಂದು ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಾಲಿಗೆ ಮುನಿರಾಜುರವರು ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ ಹೆಣ್ಣು ಮಕ್ಕಳ ಪಾಠಶಾಲೆ, ಮೌಲಾನಾ ಆಜಾದ್ ಸರಕಾರಿ ಉರ್ದು ಪ್ರೌಢಶಾಲೆ, ಮಹಾತ್ಮಾ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜೆ.ಸಿ.ಐ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ಶಿಕ್ಷಕರಾದ ತುಮಕೂರಿನ ಶ್ರೀಕಾಂತ್‌ರವರು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳಬೇಕೆಂಬ ಆಶಯ ಮಾತ್ರ ಇದ್ದರೆ ಸಾಲದು. ಇರುವ ೩೮ ದಿನಗಳಲ್ಲಿ ಅದಕ್ಕೆ ಅವಶ್ಯಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು, ಇರುವ ೩೮ ದಿನಗಳಲ್ಲಿ ನಮಗೆ ಇರುವ ೬ ಸಬ್ಜೆಕ್ಟ್ ಗಳಿಂದ ಪ್ರತಿ ಸಬ್ಜೆಕ್ಟ್ ಗೆ ಎಷ್ಟು ಸಮಯ ಮೀಸಲಿಡಬೇಕೆಂಬ ಸಮಯದ ವ್ಯವಸ್ಥೆ ಮಾಡಿಕೊಂಡು, ಹೇಗೋ ಪರೀಕ್ಷೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಹೊರಬಂದು ಹೇಗೆ ಪರೀಕ್ಷೆ ಎದುರಿಸಬೇಕು ಎಂಬ ಮನಸ್ಥಿತಿಗೆ ಒಳಗಾಗಬೇಕು ಪರೀಕ್ಷೆಯನ್ನು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದುವಂತಾಗಬೇಕು. ಸಲೀಸಾಗಿರುವ ಸುಲಭವಾಗಿರುವ ವಿಷಯಗಳನ್ನೇ ಪದೇಪದೇ ಓದುವುದನ್ನು ಬಿಟ್ಟು ಕಷ್ಟದಿಂದ ಕೂಡಿದ ವಿಷಯಗಳಿಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗಳು ದೇಶದಾದ್ಯಂತ ನಡೆಯಲಿದ್ದು, ನಮ್ಮ ದೇಶಕ್ಕೆ ವಿಶ್ವಸಂಸ್ಥೆಯಿಂದ ನೀಡುವ ಅನುದಾನವು ಸಹ ಒಟ್ಟಾರೆ ದೇಶದ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!