ಉದಯವಾಹಿನಿ, ಬೆಂಗಳೂರು: ಕೊಲೆ ಆರೋಪದ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿದ್ದರೂ ಅವರ ಮೇಲಿನ ಅಭಿಮಾನಿಗಳ ಹುಚ್ಚು ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ.ದರ್ಶನ್‌ ಮೇಲಿನ ಅಭಿಮಾನಕ್ಕಾಗಿ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ಹೆತ್ತ ಮಗುವನ್ನೇ ಖೈದಿ ಮಾದರಿ ಅಲಂಕರಿಸಿ ಜೈಲಿನಲ್ಲಿ ದರ್ಶನ್‌ಗೆ ನೀಡಿರುವ ಖೈದಿ ಸಂಖ್ಯೆಯನ್ನೇ ಹಾಕಿ ಹುಚ್ಚಾಟ ಮೇರೆದಿದ್ದಾನೆತನ್ನ ಒಂದು ವರ್ಷದ ಮಗುವಿಗೆ ಖೈದಿಯ ರೀತಿ ಬಿಳಿ ಬಟ್ಟೆ ಹಾಕಿ ಪೋಟೋಶೂಟ್‌ ಮಾಡಿಸಿ ಖೈದಿ ನಂಬರ್‌, ಕೈ ಕೋಳದ ಮಾದರಿ ಚಿತ್ರ ಹಾಕಿ ಪೋಟೋಶೂಟ್‌ ಮಾಡಿಸಿದ್ದಾನೆ.
ಹಿಂದೆಲ್ಲ ಮಕ್ಕಳಿಗೆ ಕಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್‌ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಪೋಟೋ ಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿತ್ತು.ಆದರೆ ಈಗ ಬೆಳೆಯುವ ಮಗುವಿಗೆ ಖೈದಿ ರೀತಿ ಉಡುಪು ತೊಡಿಸಿ ಪೋಟೋ ಶೂಟ್‌ ಮಾಡಿಸಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕೊಲೆ ಆರೋಪದ ಮೇಲೆ ತಮ ನೆಚ್ಚಿನ ನಾಯಕ ಜೈಲು ಪಾಲಾದರೂ ಆತನ ಮೇಲಿನ ಅಭಿಮಾನದಿಂದ ಜನ ದೇವರಿಗೆ ವಿಶೇಷ ಪೂಜೆ ಮಾಡಿಸುವುದು, ಉರುಳು ಸೇವೆ ಮಾಡಿಸುವುದನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೆಲವರಂತೂ ಇನ್ನು ಪರಪ್ಪನ ಅಗ್ರಹಾರದ ಜೈಲಿನ ಮುಂದೆ ತಮ ನಾಯಕನ ಬಿಡುಗಡೆಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.ಇದೀಗ ತಮ ಮಗುವಿಗೆ ಖೈದಿ ಮಾದರಿ ಬಟ್ಟೆ, ನಂಬರ್‌ ತೊಡಿಸಿ ಹುಚ್ಚಾಟ ಪ್ರದರ್ಶಿಸಿರುವುದು ಅತಿಯಾಯ್ತು ಎನಿಸತೊಡಗಿದೆ.

Leave a Reply

Your email address will not be published. Required fields are marked *

error: Content is protected !!