ಉದಯವಾಹಿನಿ, ನವದೆಹಲಿ: ಪರಸ್ಪರ ಕೈ ಹಿಡಿದುಕೊಂಡೇ ತಾಯಿ ಮಗ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.ರಾಷ್ಟ್ರ ರಾಜಧಾನಿಯಲ್ಲಿ ಸುರಿದ ಮಳೆಯ ಸಮಯದಲ್ಲಿ 23 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.ತನುಜಾ ಬಿಷ್ಟ್ ತನ್ನ ಮೂರು ವರ್ಷದ ಪ್ರಿಯಾಂಶ್‌ನೊಂದಿಗೆ ಗಾಜಿಪುರದ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಮಳೆಯಿಂದಾಗಿ ರಸ್ತೆ ಜಲಾವತವಾಗಿದ್ದು, ತನುಜಾ ತನ್ನ ಮಗನೊಂದಿಗೆ ತೆರೆದ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋದರು. ಗಂಟೆಗಳ ನಂತರ, ಎರಡು ಶವಗಳನ್ನು ಸುಮಾರು 500 ಮೀ ದೂರದಲ್ಲಿ ಪಡೆಯಲಾಯಿತು, ಆ ಸಂದರ್ಭದಲ್ಲಿ ತಾಯಿ ಇನ್ನೂ ತನ್ನ ಮಗನ ಕೈಯನ್ನು ಹಿಡಿದಿಕೊಂಡೇ ಜೀವಬಿಟ್ಟಿರುವುದು ಕಂಡುಬಂದಿದೆ.

ರಕ್ಷಣಾ ಕಾರ್ಯಾಚರಣೆ ಚುರುಕಾಗಿದ್ದರೆ ತಾಯಿ ಮತ್ತು ಮಗನನ್ನು ರಕ್ಷಿಸಬಹುದಿತ್ತು ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ. ನೋ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿ ಗೋವಿಂದ್‌ ಸಿಂಗ್‌ ಅವರು ಕೆಲಸದಲ್ಲಿದ್ದಾಗ ದುರಂತ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ಚುರುಕಾಗಿದ್ದರೆ ನನ್ನ ಪತ್ನಿ ಹಾಗೂ ಮಗನನ್ನು ರಕ್ಷಿಸಬಹುದಿತ್ತು, ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನುಜಾ ಅವರ ಚಿಕ್ಕಪ್ಪ ಹರೀಶ್‌ ರಾವತ್‌ ಅವರು ಚರಂಡಿ ತುಂಬಿ ಹರಿಯುತ್ತಿದ್ದು, ಸಮಯಕ್ಕೆ ಸರಿಯಾಗಿ ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನಮಗೆ ರಾತ್ರಿ 7.30 ರ ಸುಮಾರಿಗೆ ಮಾಹಿತಿ ಸಿಕ್ಕಿತು. ನಾವು 100 ಅನ್ನು ಡಯಲ್‌ ಮಾಡಿದೆವು ಮತ್ತು ಪೊಲೀಸರು ರಕ್ಷಣಾ ತಂಡದೊಂದಿಗೆ ಬಂದರು. ಆದರೆ ಅವರ ಬಳಿ ಸರಿಯಾದ ಉಪಕರಣಗಳು ಇರಲಿಲ್ಲ. ಅವರು ಪ್ರಯತ್ನಿಸುತ್ತಲೇ ಇದ್ದರು, ಆದರೆ ಅದು ಕೆಲಸ ಮಾಡಲಿಲ್ಲ.

Leave a Reply

Your email address will not be published. Required fields are marked *

error: Content is protected !!