ಉದಯವಾಹಿನಿ, ಬೆಂಗಳೂರು : ನನ್ನನ್ನು ಕೆಣಕಬೇಡ ಶಿವಕುಮಾರ್​ ಎಂದು ಡಿಸಿಎಂ ಡಿಕೆಶಿ ಅವರಿಗೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.ಹೆಚ್​​​​ಡಿಕೆ ವಿರುದ್ಧ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಡಿಕೆಶಿ ಅವರು ವಾಗ್ದಾಳಿ ನಡೆಸಿದ್ದಕ್ಕೆ, ಇದೀಗ ಹೆಚ್​​​ಡಿಕೆ ತಿರುಗೇಟು ನೀಡಿದ್ದು, ನನ್ನ ಬಳಿಯೂ ಸಾಕಷ್ಟು ಮೆಟಿರಿಯಲ್​ಗಳು ಬರುತ್ತವೆ.

ಅವುಗಳನ್ನು ಆಚೆ ತಗೆದರೆ ಭೂಮಿ ಮೇಲೆ ಬದುಕೋಕೆ ಆಗಲ್ಲ. ನಿಮ್ಮ ಕತೆ ಅಸ್ಟೇ ಎಂಬಂತೆ ಹೆಚ್​​​ಡಿಕೆ ವಾರ್ನಿಂಗ್​​ ಮಾಡಿದ್ದಾರೆ.
ಇನ್ನು ಹೆಚ್​​.ಡಿ.ರೇವಣ್ಣನ ಮಗನನ್ನು ಒಳಗೆ ಹಾಕಿಸಲು ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೀರಿ. ಅದೇ ರೀತಿ ನಿಮ್ಮಲ್ಲಿ ಯಾರನ್ನು ಜೈಲಿಗೆ ಕಳುಹಿಸಬೇಕೋ, ಅವರನ್ನು ಕಳುಹಿಸಲು ಆ ಭಗವಂತೆ ಈಗಾಗಲೇ ನಿರ್ಧಾರ ಮಾಡಿದ್ದಾನೆ. ಆಗ ಯಾವ ರಕ್ಷಣೆ ಪಡೆದರೂ ನೀವು ಉಳಿಯೋಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. 14 ವರ್ಷಗಳ ಹಿಂದಿನ ಕೇಸ್​​ ಹಿಡಿದುಕೊಂಡು ಅದೇನೋ ಅಲ್ಲಾಡಿಸೋಕೆ ಈಗ ನಿಂತಿದ್ದೀರಿ. ನಾವೂ ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಹೆಚ್​​​​​ಡಿಕೆ ಕೌಂಟರ್​ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!