ಉದಯವಾಹಿನಿ,ರಾಜಭವನದಲ್ಲಿ ನಡೆಯಲಿರುವಂತ ಸಮಾರಂಭದಲ್ಲಿ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಈ ನಡುವೆ ಸಿದ್ಧರಾಮಯ್ಯ ಸಂಪುಟದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಶಾಸಕ ಆರ್ , ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಶಿರಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.
ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೂ ಸಚಿವ ಸ್ಥಾನ ಕೈತಪ್ಪಿದೆ. ಇವರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ತೆರಳಿ, ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಸಚಿವಸ್ಥಾನಕ್ಕಾಗಿ ಮನವಿ ಕೂಡ ಮಾಡಿದ್ದರು. ಆದರೇ ಇವರಿಗೂ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡದೇ ಬಿಕ್ ಶಾಕ್ ನೀಡಿದೆ.ಹೀಗಿದೆ ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿ
ಕೃಷ್ಣಭೈರೇಗೌಡ,ದಿನೇಶ್ ಗುಂಡೂರಾವ್,ಸಂತೋಷ್ ಲಾಡ್,ಎಂ.ಸಿ ಸುಧಾಕರ್,ಲಕ್ಷ್ಮೀ ಹೆಬ್ಬಾಳ್ಕರ್,ಡಾ. ಶರಣಪ್ರಕಾಶ್ ಪಾಟೀಲ್,ಹೆಚ್ ಕೆ ಪಾಟೀಲ್,ಈಶ್ವರ್ ಖಂಡ್ರೆ,ರಹೀಂ ಖಾನ್,ಬಿ.ನಾಗೇಂದ್ರ,ಮಂಕಾಳು ವೈದ್ಯ,
ಮಧು ಬಂಗಾರಪ್ಪ,ಬೋಸರಾಜು,ಕೆ ಎನ್ ರಾಜಣ್ಣ,ಶಿವಾನಂದ ಪಾಟೀಲ್,ಪಿರಿಯಾಪಟ್ಟಣ ವೆಂಕಟೇಶ್,
ಎಸ್ ಎಸ್ ಮಲ್ಲಿಕಾರ್ಜುನ,ಸಿ.ಪುಟ್ಟರಂಗಶೆಟ್ಟಿ,ಚಲವುರಾಯಸ್ವಾಮಿ,ಶಿವರಾಜ ತಂಡರಗಿ,ಆರ್ ಬಿ ತಿಮ್ಮಾಪುರ,
ರುದ್ರಪ್ಪ ಲಮಾಣಿ,ಡಾ.ಹೆಚ್ ಸಿ ಮಹದೇವಪ್ಪ. ಸೇರಿ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!