ಉದಯವಾಹಿನಿ, ಬೆಳಗಾವಿ: ನೊಂದ ಮಹಿಳೆಯೊಬ್ಬರು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಬಂದು ಮಹಿಳೆಯನ್ನು ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ಅಥಣಿ ಸೇತುವೆ ಮೇಲಿನಿಂದ ಮಹಿಳೆ ಕೃಷ್ಣಾ ನದಿಗೆ ಹಾರಿದ್ದರು.ಇದನ್ನು ದೂರದಿಂದ ಗಮನಿಸಿದ ಯುವಕ ಪ್ರಶಾಂತ್ ಗಸ್ತಿ, ತಕ್ಷಣ ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ.ನದಿಗೆ ಹಾರಿ ಹಗ್ಗದ ಸಹಾಯದಿಂದ ಮಹಿಳೆಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಅಥಣಿಯ ತೀರ್ಥ ಗ್ರಾಮದವರು ಎನ್ನಲಾಗಿದೆ. ಮಹಿಳೆ ದುಡುಕಿನ ನಿರ್ಧಾರ ಕೈಗೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!