ಉದಯವಾಹಿನಿ, ಹೈದರಾಬಾದ್  : ಪತ್ನಿಯ ಮೇಲಿನ ಕೋಪಕ್ಕೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ಜಿಲ್ಲಾಯಲ್ಲಿ ನಡೆದಿದೆ. ವಾಕಿಂಗ್‌ಗೆ ಹೊಗೋಣ ಎಂದು ತನ್ನ ಇಬ್ಬರು ಮಕ್ಕಳಾದ ವಿಘ್ನೇಶ್ (7), ಮತ್ತು ಅನುರಿದ್ (5) ಅವರನ್ನು ಕರೆದುಕೊಂಡು ಹೋಗಿ ಕೃಷಿ ಬಾವಿಗೆ ತಳ್ಳಿ ಶ್ರೀನಿವಾಸ್ ರೆಡ್ಡಿ ಎಂಬ ಪಾಪಿ ತಂದೆ ತಾನು ಹಾರಿ ಆತ್ಮಹತ್ಯೆ ಮಾಡಕೊಂಡಿದ್ದಾನೆ.
ಕೌಟುಂಬಿಕ ಕಲಹವೇ ಶ್ರೀನಿವಾಸ್ ರೆಡ್ಡಿಯ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮಕ್ಕಳು ಮನೆಗೆ ಹಿಂತಿರುಗದಿದ್ದಾಗ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದರು. ಬಾವಿಯ ಬಳಿ ಶ್ರೀನಿವಾಸ್ ರೆಡ್ಡಿ ಅವರ ವಾಚ್ ಹಾಗೂ ದ್ವಿಚಕ್ರವಾಹನ ಪತ್ತೆಯಾಗಿದೆ.
ರೆಡ್ಡಿಯ ಮೃತದೇಹವನ್ನು ಪತ್ತೆಹಚ್ಚಲು ರಾತ್ರಿಯಿಡೀ ಪ್ರಯತ್ನಿಸಿ ಅಂತಿಮವಾಗಿ ಶವಗಳನ್ನು ಮೇಲೆತ್ತಲಾಗಿದೆ. ಪೊಲೀಸರು ಮೊದಲು ಮಕ್ಕಳ ಶವಗಳನ್ನು ಹೊರತೆಗೆದರು. ನಂತರ ತಪಾಸಣೆ ನಡೆಸಿದಾಗ ಶ್ರೀನಿವಾಸ್ ರೆಡ್ಡಿ ತಾನು ಸಾಯುವ ಮೊದಲು ಮಕ್ಕಳ ಜೀವವನ್ನು ತೆಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಡವಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಮರೆಡ್ಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!