ಉದಯವಾಹಿನಿ ಯಾದಗಿರಿ: ಈ ಇಂದೇ  ಧಾರಾಕಾರ ಸುರಿದ ಮಳೆಗೆ ಕುಸಿದ ಪಗಲಾಪುರ್ ಸೇತುವೆ ಸೇತುವೆಯ ಮೇಲೆ ಜನತೆ ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈದೀಗ  ಮಳೆಗೂ ಸಹ ಸೇತುವೆ ಇನ್ನಷ್ಟು ಕೊಚ್ಚಿಕೊಂಡು ಹೋಗುತ್ತಲೇ ಇದೆ ಎಂದು ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ  ಹೋರಾಟಗಾರ ಉಮೇಶ ಕೆ. ಮುದ್ನಾಳ್  ಆಕ್ರೋಶ ವ್ಯಕ್ತಪಡಿಸಿದ್ದ ಇನ್ನಲ್ಲೆಯಲ್ಲಿ ಸೇತುವೆ ದುಸ್ಥಿಗೆ ಮುಂದಾದ ಜಿಲ್ಲಾಡಳಿತಕ್ಕೆ ಹರ್ಷ ವ್ಯಕ್ತಪಡಿಸಿದರು.ದಸರಾ ಹಬ್ಬದ ನಿಮಿತ್ಯ ತಾತ್ಕಾಲಿಕ ವಾಗಿ ಮಾರಾಮ್ ನಿಂದ ರಸ್ತೆ ನಿರ್ಮಿಸಲಾಹಿತು ಇದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲ ಜಾಸ್ತಿಯಾಗಿತ್ತು ಆದರೆ ಅದನ್ನು ನಾನು ಕಣ್ಣಾರೆ ನೋಡಿ ಲೋಕಪಯೋಗಿ ಇಲಾಖೆಗೆ ತಿಳಿಸಿದಾಗ ಹಳೆ ಸೇತುವೆ ದುರಸ್ಥಿ ಮಾಡಲು ಮುಂದಾಗಿರೋದು ಒಳ್ಳೆ ಬೆಳವಣಿಗೆ ಹಳೆ ಸೇತುವೆ ದುರಸ್ಥಿ ಮಾಡಿ ಸಾರ್ವಜನಿಕರಿಗೆ ಮತ್ತು  ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.ಯಾದಗಿರಿ ಜಿಲ್ಲಾ ಕೇಂದ್ರದಿಂದ ಕೂಗಳತೆ ಎಲ್ಲಿರವ ಯಾದಗಿರಿ ಹಿಂದ ಸೈದಾಪುರಗೆ ಹೋಗುವ ಮಾರ್ಗದಲ್ಲಿ ಪಗಲಾಪುರ್ ಪ್ರಮುಖ ಗ್ರಾಮೀಣ ರಸ್ತೆಯ ಸ್ಥಳಕ್ಕೆ ಬುದುವಾರ ಮುಂಜಾನೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿರುವ ಅವರು ಈ ಹಿಂದೆ ಸುರಿದ ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥತಿಗಿತ್ತವಾಗಿತ್ತು ಈ ಸೇತುವೆ ಈದೀಗ ಹಲವು ವರ್ಷದಿಂದ ಮಳೆಯ ಕಾರಣದಿಂದಲೇ ಮತ್ತಷ್ಟು ಕೊಚ್ಚಿ ಹೋಗುತ್ತಿದೆ. ಈ ಸೇತುವೆಗೆ ರಸ್ತೆ ನಿರ್ಮಿಸಿ ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಅವರು ತಿಳಿಸಿದ್ದರು ಇದರಿಂದ ಈ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದರಿಂದ್ದ  ಮತ್ತು ಶಾಲೆ ಕಾಲೇಜ್ ಮಕ್ಕಳಿಗೆ ಗ್ರಾಮಸ್ಥರಿಗೆ  ಅನುಗುಣವಾಗಿ ಶಿಘ್ರದಲ್ಲೆ ಕಾಮಗಾರಿಯನ್ನು ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಹೆಚ್ಚರಿಸಿದ್ದರು.
ತುರ್ತಾಗಿ ಈ ಸೇತುವೆಯನ್ನು ಮೇಲದರ್ಜೆಗೆ ಏರಿಸಿ ಹೊಸ ಸೇತುವೆಯನ್ನು ಹಚ್ಚು ಕಟ್ಟಾಗಿ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು  ಅಂದಾಗ ಮಾತ್ರ ಈ ಭಾಗದ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವುಮಾಡಿ ಕೊಟ್ಟಂತೆ ಹಾಗುತ್ತದ್ದೆ ಇಲ್ಲದಿದ್ದರೆ ಒಂದಲ್ಲಾ ಒಂದು ದಿನ ಸೇತುವೆ ಸಮಸ್ಯೆ ಉಂಟಾಗುತ್ತಲೇ ಇರುತ್ತದೇ ಅದ ಕಾರಣ ಜಿಲ್ಲಾಡಳಿತ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು  — ಉಮೇಶ್ ಕೆ ಮುದ್ನಾಳ್ ಸಾಮಾಜಿಕ ಹೋರಾಟಗಾರ

Leave a Reply

Your email address will not be published. Required fields are marked *

error: Content is protected !!