ಉದಯವಾಹಿನಿ , ಅಗರ್ತಲಾ: ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡದಿರಲು ಕೋಲ್ಕತ್ತಾ ಆಸ್ಪತ್ರೆಯೊಂದು ನಿರ್ಧರಿಸಿದ ಬೆಳವಣಿಗೆ ನಂತರ ತ್ರಿಪುರಾದ ಅಗರ್ತಲಾ ಆಸ್ಪತ್ರೆಯೊಂದು ಇಂತಹದ್ದೇ ತೀರ್ಮಾನ ಕೈಗೊಂಡಿದೆ.
ಅಗರ್ತಲಾ ಮೂಲದ ಐಎಲ್ಎಸ್ ಆಸ್ಪತ್ರೆಯು ನೆರೆಯ ದೇಶದ ರೋಗಿಗಳಿಗೆ ತನ್ನ ಸಾಮೀಪ್ಯ ಮತ್ತು ಕೈಗೆಟುಕುವ ಚಿಕಿತ್ಸಾ ವೆಚ್ಚದ ಕಾರಣದಿಂದಾಗಿ ಜನಪ್ರಿಯ ತಾಣವಾಗಿದೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಉತ್ತರ ಕೋಲ್ಕತ್ತಾದ ಜೆಎನ್ ರೇ ಆಸ್ಪತ್ರೆಯು ಇದೇ ಕಾರಣಗಳಿಗಾಗಿ ನೆರೆಯ ದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿತು.ಐಎಲ್ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಹಜಾರಿಕಾ, ನಮ ಆರೋಗ್ಯ ಸೌಲಭ್ಯದಲ್ಲಿ ಬಾಂಗ್ಲಾದೇಶದ ಜನರಿಗೆ ಚಿಕಿತ್ಸೆಯನ್ನು ಸ್ಥಗಿತಗೊಳಿಸುವ ಬೇಡಿಕೆಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಅಖೌರಾ ಚೆಕ್ ಪೋಸ್ಟ್ ಮತ್ತು ಐಎಲ್ಎಸ್ ಆಸ್ಪತ್ರೆಗಳಲ್ಲಿನ ನಮ ಸಹಾಯ ಕೇಂದ್ರಗಳನ್ನು ಇಂದಿನಿಂದ ಮುಚ್ಚಲಾಗಿದೆ ಎಂದಿದ್ದಾರೆ.
ಭಾರತೀಯ ಧ್ವಜದ ಬಗೆಗಿನ ಅಗೌರವ ಮತ್ತು ನೆರೆಯ ದೇಶದಲ್ಲಿ ಹಿಂದೂಗಳ ಚಿಕಿತ್ಸೆ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಉಲ್ಲೇಖಿಸಿ, ಬಾಂಗ್ಲಾದೇಶದ ನಾಗರಿಕರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುವುದನ್ನು ಸೌಲಭ್ಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ಜನರ ಗುಂಪಿಗೆ ಪ್ರತಿಕ್ರಿಯೆಯಾಗಿ ಹಜಾರಿಕಾ ಅವರ ಹೇಳಿಕೆಗಳು ಬಂದವು.
