
ಉದಯವಾಹಿನಿ, ನವದೆಹಲಿ : ಸಂಸತ್ ನಲ್ಲಿ ಅದಾನಿಯ ಮೆಗಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ INDIA’ ಮೈತ್ರಿಕೂಟ ಪ್ರತಿಭಟನೆ ನಡೆಸಿದೆ. ಈ ಕುರಿತು ಕಾಂಗ್ರೆಸ್ ಟೀಟ್ ಮಾಡಿದ್ದು ಅದಾನಿಯ ಮೆಗಾ ಹಗರಣದ ಕುರಿತು INDIA ಮೈತ್ರಿಕೂಟ ಸಂಸತ್ತಿನಲ್ಲಿ ಚರ್ಚೆ ಮಾಡಲು ಬಯಸುತ್ತಿದೆ. ಆದರೆ ಅಧಿವೇಶನ ಆರಂಭವಾದಾಗಿನಿಂದಲೂ ಮೋದಿ ಸರ್ಕಾರ ಚರ್ಚೆಯಿಂದ ಓಡುತ್ತಲೇ ಇದೆ. ಇದನ್ನು ವಿರೋಧಿಸಿ ಮತ್ತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಂಸತ್ತಿನ ಹೊರ ಆವರಣದಲ್ಲಿ INDIA ಮೈತ್ರಿಕೂಟದ ನಾಯಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಟೀಟ್ ಮಾಡಿದೆ.
