ಉದಯವಾಹಿನಿ, ರಾಯಚೂರು: ಐದು ತಿಂಗಳಿಂದ ರಾಯಚೂರು ತಾಲ್ಲೂಕಿನ ಗ್ರಾಮಸ್ಥರು, ಜಾನುವಾರು ಮಾಲೀಕರಲ್ಲಿ ಆತಂಕ ಮೂಡಿಸಿದ್ದ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಮಲಿಯಾಬಾದ್ ಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಸಾರ್ವಜನಿಕರ ತೀವು ಒತ್ತಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿ ಚಿರತೆ ಸಂಚರಿಸಿದ ಹೆಜ್ಜೆ ಗುರುತು ಹಾಗೂ ಅದರ ಮಲವನ್ನು ಗುರುತಿಸಿ ಮೂರು ಕಡೆಗಳಲ್ಲಿ ಚಿರತೆ ಹಿಡಿಯಲು ಬೋನುಗಳನ್ನು ಇಟ್ಟಿದ್ದರು. ಚಿರತೆಯನ್ನು ಬೋನಿಗೆ ಬೀಳಿಸಲು ಮಾಂಸದ ತುಣುಕು ಹಾಗೂ ಒಂದು ಆಕಳು ಕರುವನ್ನು ಬೋನಿನೊಳಗೆ ಕಟ್ಟಿ ಹಾಕಲಾಗಿತ್ತು.
ಚಿರತೆಗೆ ಸಂಶಯ ಬಾರದಂತೆ ಹೆಣ್ಣು ಚಿರತೆಯ ಮೂತ್ರವನ್ನು ಬೋನಿನ ಸುತ್ತ ಸಿಂಪಡಿಸಿ ಜಾಲಬೀಸಲಾಗಿತ್ತು ಚಿರತೆ ಆಗಾಗ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಬೋನಿಗೆ ಬಿದ್ದಿರಲಿಲ್ಲ. ಮಲಿಯಾಬಾದ್ ಗೋಶಾಲೆಯ ಆವರಣದಲ್ಲೇ ಓಡಾಡಿ ಜನರಲ್ಲಿ ಭೀತಿ ಮೂಡಿಸಿತ್ತು.
ರಾಯಚೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ ನೇತೃತ್ವದ ತಂಡ ಸಿಬ್ಬಂದಿಯೊಂದಿಗೆ ಐದು ತಿಂಗಳಿಂದ ನಿತ್ಯ ಶೋಧ ಕಾರ್ಯ ನಡೆಸಿದ್ದರು. ಪ್ರಾಥಮಿಕ ಹಂತದಲ್ಲಿ ನಡೆಸಿದ ಪ್ರಯತ್ನ ಫಲಿಸರಲಿಲ್ಲ.

Leave a Reply

Your email address will not be published. Required fields are marked *

error: Content is protected !!