ಉದಯವಾಹಿನಿ,ಕಾಡ್ಕಂಡು: ನೇಪಾಳದ ಪರ್ಸಾ ಜಿಲ್ಲೆಯ ಬೀರಗಂಜ್ನಲ್ಲಿ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಸಂಘರ್ಷ ಉಂಟಾಗಿದ್ದು, ಕರ್ಪೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.’ಬೀರಗಂಜ್ ಪುರಸಭೆ ವ್ಯಾಪ್ತಿಯಲ್ಲಿ ಕರ್ಪೂ ವಿಧಿಸಲಾಗಿತ್ತು. ಆ ಬಳಿಕ ಕರ್ಪೂವನ್ನು ವಿಸ್ತರಿಸಲಾಗಿದೆ’ ಎಂದು ಪರ್ಸಾ ಜಿಲ್ಲಾಡಳಿತವು ತಿಳಿಸಿದೆ.’ಹನುಮನ ಮೂರ್ತಿಯ ಮೆರವಣಿಗೆ ಬೀರಗಂಜ್ ನ ಘಂಟಾಗರ್ನಿಂದ ಆರಂಭವಾಗಿ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಾಗಿದೆ. ಈ ವೇಳೆ ಕೆಲವು ದುಷ್ಕರ್ಮಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಪೊಲೀಸರು ಒಳಗೊಂಡಂತೆ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
