ಉದಯವಾಹಿನಿ, ನವದೆಹಲಿ: ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಇಸ್ಲಾಮಾಬಾದ್ ತುರ್ತು ಸಭೆಯನ್ನು ಕೋರಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಮುಚ್ಚಿದ ಸಮಾಲೋಚನೆ ನಡೆಸಲಿದೆ.
ಪಾಕಿಸ್ತಾನವು ಪ್ರಸ್ತುತ 15 ರಾಷ್ಟ್ರಗಳ ಪ್ರಬಲ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಇದು ಮೇ ತಿಂಗಳಲ್ಲಿ ಗ್ರೀಸ್ ಅಧ್ಯಕ್ಷತೆ ವಹಿಸುತ್ತಿದೆ.ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಇಸ್ಲಾಮಾಬಾದ್ ಮುಚ್ಚಿದ ಸಮಾಲೋಚನೆಗಳನ್ನು ಕೋರಿದೆ ಮತ್ತು ಗ್ರೀಕ್ ಪ್ರೆಸಿಡೆನ್ಸಿ ಸಭೆಯನ್ನು ಇಂದು ಮಧ್ಯಾಹ್ನ ನಿಗದಿಪಡಿಸಿದೆ.
ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಹೊರತುಪಡಿಸಿ ಅಲ್ಲೀರಿಯಾ. ಡೆನ್ಮಾರ್ಕ್, ಗ್ರೀಸ್, ಗಯಾನಾ. ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಫ್ಲೋವೇನಿಯಾ ಮತ್ತು ಸೊಮಾಲಿಯಾ ಈ ಮಂಡಳಿಯ 10 ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಭೆಗೆ ವಿನಂತಿ ಬಂದರೆ ಆದ್ಯತೆ ನೀಡಲಾಗುವುದು ಎಂದು ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜಿಲೊಸ್ ಸೆಕೆರಿಸ್‌ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!