ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳ ಸ್ನಾನ ಘಟ್ಟದ ಬಳಿ ಅನಾಮಿಕ ವ್ಯಕ್ತಿ ಗುರುತಿಸಿರುವ 13 ನೇ ಸ್ಥಳದಲ್ಲಿ ಜಿಪಿಆರ್‌ ಬಳಸಿ ನಡೆಸುತ್ತಿದ್ದ ಶೋಧ ಕಾರ್ಯ ಮುಗಿದಿದ್ದು ಅದರ ವರದಿಯನ್ನು ತಂಡ ಇಂದು ಅಥವಾ ನಾಳೆ ಎಸ್‌‍ಐಟಿಗೆ ನೀಡಲಿದೆ. ಈ ತಂಡ ನೀಡುವ ವರದಿ ಆಧಾರದ ಮೇಲೆ ಎಸ್‌‍ಐಟಿ ಉತ್ಖನನವನ್ನು ಆರಂಭಿಸಲಿದೆ. ಸೋಮವಾರ ದೆಹಲಿಯಿಂದ ಮಂಗಳೂರಿಗೆ ಬಂದ ಜಿಪಿಆರ್‌ ತಂಡ ಅಂದು ಪ್ರಯೋಗಿಕವಾಗಿ 13ನೇ ಸ್ಥಳದಲ್ಲಿ ಪರಿಶೀಲಿಸಿತು.ಆ ಸ್ಥಳದಲ್ಲಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿ ನಿನ್ನೆ ಅನಾಮಿಕ ತೋರಿಸಿರುವ ಜಾಗದಲ್ಲಿ ಇಂಚಿಂಚೂ ಪರಿಶೀಲಿಸಿದೆ.
ಈ ನಡುವೆ 13 ನೇ ಸ್ಥಳದಲ್ಲಿ ಎಸ್‌‍ಐಟಿ ಉತ್ಖನನ ಆರಂಭಿಸಿದ್ದು, 10 ಅಡಿ ಅಗಲ ಹಾಗೂ 10 ಅಡಿ ಆಳ ಗುಂಡಿ ತೆಗೆದರಾದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ. ಇದುವರೆಗೂ ಉತ್ಖನನ ಮಾಡಿರುವ 16 ಸ್ಥಳಗಳಲ್ಲಿ ದೂರುದಾರ ಹೇಳಿರುವಂತೆ ಯಾವುದೇ ಮಹತ್ವದ ಸಾಕ್ಷ್ಯಾಗಳು ಲಭ್ಯವಾಗದ ಕಾರಣ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌‍ಐಟಿ ಚಿಂತನೆ ನಡೆಸುತ್ತಿದೆ.

6ನೇ ಸ್ಥಳದಲ್ಲಿ ಮಾತ್ರ ಕೆಲವು ಮೂಳೆಗಳು ಸಿಕ್ಕಿದ್ದು, ಉಳಿದ ಯಾವುದೇ ಜಾಗಗಳಲ್ಲೂ ಮಹತ್ವರವಾದ ಕುರುಹುಗಳು ಸಿಕ್ಕಿಲ್ಲ.ದೂರುದಾರ ತೋರಿಸಿರುವ ಜಾಗಗಳಲ್ಲಿ ಎಸ್‌‍ಐಟಿ ಉತ್ಖನನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.ಹಾಗಾಗಿ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌‍ಐಟಿ ನಿರ್ಧರಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!