ಉದಯವಾಹಿನಿ, ನವದೆಹಲಿ: ಕೌನ್ ಬನೇಗಾ ಕರೋಡ್‌ಪತಿಯ ವಿಶೇಷ ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi), ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh), ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಲಿ (Prerna Deosthalee) ಅವರು ಏಪ್ರಿಲ್ 22, 2025ರ ಪಹಲ್ಗಾಮ್ ದಾಳಿಯ (Pahalgam Attack) ನಂತರ ಭಾರತದ ಭಯೋತ್ಪಾದನೆ-ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ (Operation Sindoor) ಕುರಿತ ಕತೆಯನ್ನು ಬಿಚ್ಚಿಟ್ಟರು.
ನಾವು ಶತ್ರುವಿನ ಪ್ರದೇಶದ ಒಳಗೆ ದಾಳಿ ಮಾಡಿ ಭಯೋತ್ಪಾದಕರ ಹೆಡೆಮುರಿ ಕಟ್ಟಿದ್ದೇವೆ. 21 ಭಯೋತ್ಪಾದಕ ಶಿಬಿರಗಳನ್ನು ಗುರುತಿಸಿ, 9 ಶಿಬಿರಗಳ ಮೇಲೆ 25 ನಿಮಿಷಗಳಲ್ಲಿ ದಾಳಿ ನಡೆಸಿದ್ದೇವೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು. ಮೇ 7, 2025ರಂದು ಆರಂಭವಾದ ಈ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ನಿಖರ ದಾಳಿ ನಡೆಸಿ ಹಲವಾರು ಭಯೋತ್ಪಾದಕರನ್ನು ಮಟ್ಟ ಹಾಕಲಾಯಿತು.

ಕರ್ನಲ್ ಖುರೇಷಿ, “ಬಹವಾಲ್ಪುರ್ ಜೈಶ್-ಎ-ಮೊಹಮ್ಮದ್‌ನ ಕೇಂದ್ರವಾಗಿತ್ತು, ಅಲ್ಲಿ ಪಠಾಣ್‌ಕೋಟ್ ಮತ್ತು ಪಹಲ್ಗಾಮ್ ದಾಳಿಯ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿತ್ತು. ಮುರಿದ್ಕೆಯಲ್ಲಿ ಲಷ್ಕರ್-ಎ-ತೊಯ್ಬಾದ ಕೇಂದ್ರವಿದ್ದು, ಅಜ್ಮಲ್ ಕಸಾಬ್ ಮತ್ತು ಡೇವಿಡ್ ಹೆಡ್ಲಿಯಂತಹವರಿಗೆ ತರಬೇತಿ ನೀಡಲಾಗಿತ್ತು. ಆದ್ದರಿಂದ ಈ ಸ್ಥಳಗಳನ್ನು ಧ್ವಂಸಗೊಳಿಸಬೇಕಿತ್ತು” ಎಂದರು. ಪಾಕಿಸ್ತಾನವು 300-400 ಸಶಸ್ತ್ರ ಮತ್ತು ಅಸ್ತ್ರರಹಿತ ಡ್ರೋನ್‌ಗಳನ್ನು ಕಳುಹಿಸಿತ್ತು ಎಂದು ಖುರೇಷಿ ಬಹಿರಂಗಪಡಿಸಿದರು, ಆದರೆ ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆ ಇವುಗಳನ್ನು ಯಶಸ್ವಿಯಾಗಿ ತಡೆಯಿತು.

Leave a Reply

Your email address will not be published. Required fields are marked *

error: Content is protected !!