ಉದಯವಾಹಿನಿ, ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಇಂದು ಆದೇಶಿಸಿದೆ. ಮೆಡಿಕಲ್ ಸೀಟು ಕೊಡಿಸುವುದಾಗಿ ಪ್ರಕಾಶ್ ಕುಮಾರ್ ಯರಪ್ಪ ಎಂಬುವರಿಂದ ದಿವಂಗತ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪ ಅವರ ಪುತ್ರ ಜೆ.ನರಸಿಂಹಸ್ವಾಮಿ ಅವರು ಸೀಟು ಕೊಡಿಸಿರಲಿಲ್ಲ. ಮೆಡಿಕಲ್ ಸೀಟಿಗಾಗಿ ನೀಡಿದ್ದಂತ 45 ಲಕ್ಷ ಹಣ ವಾಪಾಸ್ಸು ಕೇಳಿದಾಗ, ಅದಕ್ಕೆ ಪ್ರಕಾಶ್ ಕುಮಾರ್ ಯರಪ್ಪ ಅವರಿಗೆ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು.
ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕಾಶ್ ಕುಮಾರ್ ಯರಪ್ಪ ಅವರು ಜೆ.ನರಸಿಂಹಸ್ವಾಮಿ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಜೆ.ನರಸಿಂಹಸ್ವಾಮಿಗೆ 6 ತಿಗಂಳ ಸೆರೆವಾಸ ವಿಧಿಸಿ ಆದೇಶಿಸಿದೆ. ಅಲ್ಲದೇ 2 ತಿಂಗಳಲ್ಲಿ 45 ಲಕ್ಷ ಹಣವನ್ನು ಹಿಂದಿರುಗಿಸುವಂತೆ ಸೂಚಿಸಿದೆ. ಇನ್ನೂ ಜೆ.ನರಸಿಂಹಸ್ವಾಮಿ ಅವರು ಹಣ ಹಿಂದಿರುಗಿಸದವರೆಗೊ ಜಾಮೀನು ನೀಡದಿರುವಂತ ಕೋರ್ಟ್ ಆದೇಶಿಸಿದೆ. ಇದೇ ಆರೋಪದ ಬಗ್ಗೆ ಕ್ರಿಮಿನ್ ಪ್ರಕರಣ ಬಾಕಿ ಇದೆ. ಸದ್ಯ ಚೆಕ್ ಬೌನ್ಸ್ ಕೇಸ್ ನಲ್ಲಿ ಮಾತ್ರ ಜೆ.ನರಸಿಂಹಸ್ವಾಮಿಗೆ ಜೈಲು ಶಿಕ್ಷೆ ವಿಧಿಸಿದೆ.
