ಉದಯವಾಹಿನಿ, ಬೆಂಗಳೂರು: ಕನಕಪುರ ರಸ್ತೆಯಲ್ಲಿನ ಮಣಿಪಾಲ ಆಸ್ಪತ್ರೆಯು ಶಿಕ್ಷಕರ ದಿನವನ್ನು ವಿಶಿಷ್ಟವಾಗಿ ಆಚರಿಸಿದೆ. ನಗರದ ಪ್ರತಿಷ್ಠಿತ ಆರ್ಎಂಎಸ್ ಇಂಟರ್ನ್ಯಾಷನಲ್ ಸ್ಕೂಲ್, ಶ್ರೀ ಕುಮಾರನ್ ಪಬ್ಲಿಕ್ ಸ್ಕೂಲ್, ದೆಹಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಸೌತ್, ಇನ್ಸೈಟ್ ಅಕಾಡೆಮಿ ಸ್ಕೂಲ್ ಬೆಂಗಳೂರು ಮತ್ತು ಚೈತನ್ಯ ಶಾಲೆಗಳ ಸಹಯೋಗದೊಂದಿಗೆ, ಶಿಕ್ಷಿತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿರುವ ಶಿಕ್ಷಕರನ್ನು ವಿಶಿಷ್ಟ ಆರೋಗ್ಯ ರಕ್ಷಣಾ ಕಾರ್ಯಕ್ರಮದ ಮೂಲಕ ಗೌರವಿಸಿದೆ.
ಕಾರ್ಯಕ್ರಮದಲ್ಲಿ ಶಿಕ್ಷಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳನ್ನು ಪರಿ ಹರಿಸಲು ವಿಶೇಷವಾಗಿ ರಚಿಸಲಾದ ಗುರು ರಕ್ಷಾ, ಗುರು ಶಕ್ತಿ ಮತ್ತು ಗುರು ಸುರಕ್ಷಾ ಪ್ಯಾಕೇಜ್ಗಳ ಅಡಿಯಲ್ಲಿ ಉಚಿತ ಆರೋಗ್ಯ ವೋಚರ್ಗಳನ್ನು ನೀಡಲಾಯಿತು. ಈ ಕಾರ್ಯಕ್ರಮವು ಶಿಕ್ಷಕರು, ವೈದ್ಯರು ಮತ್ತು ಶಾಲಾ ನಾಯಕರನ್ನು ಒಟ್ಟುಗೂಡಿಸಿದೆ.
ಹೆಚ್ಚಿನ ಸಂಖ್ಯೆಯ ಶಿಕ್ಷಕರು ದೀರ್ಘಕಾಲದ ಬೆನ್ನು ಮತ್ತು ಕುತ್ತಿಗೆ ನೋವು, ಕೀಲು ಸಮಸ್ಯೆಗಳು, ಧ್ವನಿ ಒತ್ತಡ, ಕಣ್ಣಿನ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಒತ್ತಡ (ಸ್ಟ್ರೆಸ್)-ಸಂಬಂಧಿತ ಅಸ್ವಸ್ಥತೆಗಳನ್ನು ಎದುರಿಸುತ್ತಿದ್ದಾರೆ. ಈ ಆರೋಗ್ಯ ಸವಾಲುಗಳು ವ್ಯಾಪಕವಾಗಿದ್ದರೂ, ಇವುಗಳಿಗೆ ಸರಿಯಾದ ಗಮನವನ್ನು ನೀಡುವುದು ತುಂಬಾ ವಿರಳ. ಇದರಿಂದಾಗಿ ಶಿಕ್ಷಕರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಮಣಿಪಾಲ್ ಆಸ್ಪತ್ರೆಗಳು ಒದಗಿಸುವ ಈ ವಿಶಿಷ್ಟ ಆರೋಗ್ಯ ಪ್ಯಾಕೇಜ್ಗಳು ಹೃದಯದ ಅಪಾಯಗಳು, ಚಯಾಪಚಯ (ಮೆಟಾಬಾಲಿಕ್) ಪರಿಸ್ಥಿತಿಗಳು, ನಾಳೀಯ (ವಾಸ್ಕ್ಯುಲರ್) ಆರೋಗ್ಯ ಮತ್ತು ಮಹಿಳೆಯರ ಯೋಗಕ್ಷೇಮಕ್ಕಾಗಿ ತಪಾಸಣೆಗಳನ್ನು ನೀಡುತ್ತವೆ. ಅವರ ಅಗತ್ಯಗಳಿಗೆ ಅನುಗುಣವಾಗಿ ಸಮಗ್ರ ಆರೈಕೆಯ ವಿಧಾನ ವನ್ನು ಖಚಿತಪಡಿಸುತ್ತವೆ.
