ಉದಯವಾಹಿನಿ,ಬೀದರ್: ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇಶದ ಅತೀ ದೊಡ್ಡ ಕೋಟೆ, ಆರು ಶತಮಾನದಷ್ಟೂ ಹಳೇದಾದ ಬಹುಮನಿ ಸುಲ್ತಾನರ ಕಾಲದ ರಾಜ ಮಹಾರಾಜರ ಘೋರಿಗಳು ಜಿಲ್ಲೆಯ ಗತವೈಭವವನ್ನ ಸಾರಿ ಸಾರಿ ಹೇಳುತ್ತಿವೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರು ಸರಕಾರ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರೆತೆಯಿಂದ ಪ್ರವಾಸಿಗರನ್ನ ಸೇಳೆಯಲು ಹರಸಾಹಸ ಪಡುವಂತಾಗಿದೆ. ದೇಶದ ಅತಿ ದೊಡ್ಡ ಕೋಟೆಯಿದ್ದರು ಪ್ರವಾಸಿಗರನ್ನ ಸೆಳೆಯುತ್ತಿಲ್ಲ ಬೀದರ್ ಜಿಲ್ಲೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ನಿರಾಸಕ್ತಿ. ಐತಿಹಾಸಿಕ ಸ್ಥಳಗಳಿದ್ದರು ಪ್ರವಾಸಿಗರನ್ನ ಸೆಳೆಯುವ ಯೋಜನೆ ಇಲ್ಲ. ಪ್ರವಾಸಿಗರನ್ನ ಸೆಳೆಯಲು ಏನೆನೋ ಮಾಡುವುದಾಗಿ ಹೇಳಿ ನೆಪಥ್ಯಕ್ಕೆ ಸರಿದ ಅಧಿಕಾರಿಗಳು. ದಖನ್ ಪ್ರಸ್ತಭೂಮಿಯಲ್ಲಿರುವ ಬೀದರ್ ಪಾರಂಪರಿಕವಾಗಿ ಸಮೃದ್ಧವಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೋಟೆಗಳು ವಾಡೆಗಳು ಚಾಲುಕ್ಯರ ಕಾಲದ ದೇವಾಲಯಗಳಿಗೆ. ಇನ್ನು ನಗರದಲ್ಲಂತೂ ಆರು ಶತಮಾನದಷ್ಟೂ ಹಳೆಯದಾದ ಬಹುಮನಿ ಸುಲ್ತಾನರ ಕಾಲದ ರಾಜಮಹಾರಾಜರ ಕಾಲದ ಘೊಡಿಗಳಿವೆ.
ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲೂ ಐತಿಹಾಸಿಕ ತಾಣಗಳಿರುವ ಕಾರಣ ಟೂರಿಸಂ ಕಾರಿಡಾರ್ ಯೋಜನೆ ರೂಪಿಸಬೇಕು ಎನ್ನುವ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಇಂದಿಗೂ ಕೂಡಾ ಕನಸಾಗಿಯೇ ಉಳಿದಿದೆ. ಇದರ ಜೊತೆಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೂ ಕೂಡಾ ಇಲ್ಲಿ ಮಾಡುತ್ತಿಲ್ಲವಾದ್ದರಿಂದ ಅವುಗಳು ಹಾಳಾಗುತ್ತಿವೆ. ಇಲ್ಲಿನ ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಶಾಲಾ ಕಾಲೇಜುಗಳಿಂದ ನೂರಾರು ಮಕ್ಕಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಮಾರಕಗಳನ್ನ ವೀಕ್ಷಣೆಗೆಂದು ಬರುವವರಿಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಟೂರ್ ಗೈಡ್ಗಳೂ ಇಲ್ಲಿ ಇಲ್ಲ. ಇನ್ನು ಇಲ್ಲಿ ಅದೆಷ್ಟೋ ಸಾಮಾಧಿಗಳಿವೆ, ಕೋಟೆಗಳಿವೆ. ಅವು ಹಾಳಾಗಿ ಹೋಗುತ್ತಿವೆ. ನಾವೆಲ್ಲ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನ ಕಳೆದ ವರ್ಷದ ಅದ್ಧೂರಿಯಾಗಿ ಆಚರಿಸಿದ್ದೇವೆ. ದೇಶದ ಇತಿಹಾಸ ಸಾರುವ ಕೋಟೆಗಳು, ಸ್ಮಾರಕಗಳು, ಇತಿಹಾಸ ಪ್ರಸಿದ್ಧ ಮಸೀದಿಗಳ ಮೇಲೆ ತ್ರಿವರ್ಣದ ಧ್ವಜದ ಜಗಮಗಿಸುವ ಲೈಟ್ ಗಳ ಅಳವಡಿಸಿ ಖುಷಿಪಟ್ಟಿದ್ದೇವೆ. ಆದರೆ ಇದರ ಜೊತೆಗೆ ಪ್ರಾವಾಸೋದ್ಯಮಕ್ಕೆ ಹೆಚ್ಚಿನ ಒತ್ತುಕೊಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.
