ಉದಯವಾಹಿನಿ, ವಿಜಯಪುರ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಕೇಳಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಕಾಲಂನಲ್ಲಿ ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂದು ಕಾಲಂ ಹಾಕಿದ್ದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಮಾತನಾಡಿದ್ದೇವೆ. ಸಿಎಂ ಎದುರು ಸಭೆಯಲ್ಲಿ ಈ ವಿಚಾರಗಳನ್ನ ಪ್ರಸ್ತಾಪಿಸಿದ್ದೇವೆ. ಮುಸ್ಲಿಂ ಕ್ರಿಶ್ಚಿಯನ್ ಯಾಕಿಲ್ಲ ಎನ್ನುವ ಬಗ್ಗೆ ಕೂಡ ಕೇಳಿದ್ದೇವೆ.
ಇಂಡಿಯಾ ಮತ್ತು ಪಾಕ್ ಮ್ಯಾಚ್ ವಿಚಾರಕ್ಕೆ ಮಾತನಾಡಿ ಪಾಕಿಸ್ತಾನ್ ಜೊತೆಗೆ ಮ್ಯಾಚ್ ಆಡಬಾರದಿತ್ತು. ಪಾಕಿಸ್ತಾನದ ಜೊತೆಗೆ ಸಂಬಂಧ ಕಟ್ ಆಗಬೇಕು. ಮುಗ್ಧ ಜನರನ್ನ ಪಾಕಿಸ್ತಾನದವರು ಹತ್ಯೆ ಮಾಡಿದ್ದಾರೆ. ಪಾಕ್ ಜೊತೆಗೆ ಮ್ಯಾಚ್ ಹಮ್ಮಿಕೊಂಡಿದ್ದೆ ಮಹಾತಪ್ಪು. ಪಾಕ್ ಜೊತೆಗೆ ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ಏನ್ ಅನಿಸುತ್ತೆ? ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ನೋವು ಆಗಲ್ವಾ? ಅಮಿತ್ ಶಾ ಪುತ್ರನೇ ಬಿಸಿಸಿ ಅಧ್ಯಕ್ಷ ಅಲ್ವಾ, ಮ್ಯಾಚ್ ಯಾಕೆ ನಡೆಸ್ತಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!